November 8, 2025
WhatsApp Image 2023-11-13 at 1.56.22 PM

ನವೆಂಬರ್ 12 ರಂದು ತಮಿಳುನಾಡಿನ ರಾಣಿಪೇಟ್ ಜಿಲ್ಲೆಯ ಮಂಬಕ್ಕಂ ಪ್ರದೇಶದಲ್ಲಿ ದೀಪಾವಳಿ ಆಚರಣೆಯ ವೇಳೆ 4 ವರ್ಷದ ಮಗು ನಾವಿಷ್ಕಾ ಎಂಬುವರು ತೀವ್ರ ಸುಟ್ಟಗಾಯಗಳಿಂದ ಸಾವನ್ನಪ್ಪಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ನೆರೆಹೊರೆಯ ಇತರ ಮಕ್ಕಳೊಂದಿಗೆ ಪಟಾಕಿ ಸಿಡಿಸುವಾಗ ಪಟಾಕಿಗಳು ಒಂದರ ನಂತರ ಒಂದರಂತೆ ಬಾಲಕಿಯ ಮೇಲೆ ಬಿದ್ದಿದ್ದರಿಂದ ಬಾಲಕಿಗೆ ಸುಟ್ಟ ಗಾಯಗಳಾಗಿವೆ.

ಬೆಂಕಿಯ ಜ್ವಾಲೆಯು ಬಟ್ಟೆಗಳಿಗೆ ಹರಡಿ ಆಕೆಯ ದೇಹದಾದ್ಯಂತ ಗಂಭೀರವಾದ ಸುಟ್ಟ ಗಾಯಗಳಿಗೆ ಕಾರಣವಾಯಿತು. ಕೂಡಲೇ ಬಾಲಕಿಯನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಆಸ್ಪತ್ರೆಗೆ ದಾಖಲಾದ ಕೆಲವೇ ನಿಮಿಷಗಳಲ್ಲಿ ಸುಟ್ಟ ಗಾಯಗಳಿಂದ ನವಿಷ್ಕಾ ಸಾವನ್ನಪ್ಪಿದ್ದಾಳೆ.

“ಸ್ಫೋಟದಿಂದ ನಾವಿಷ್ಕಾಳ ಎದೆ ಮತ್ತು ಹೊಟ್ಟೆಗೆ ಗಾಯವಾಯಿತು, ಇದು ಅವಳ ಸಾವಿಗೆ ಕಾರಣವಾಯಿತು” ಎಂದು ವೈದ್ಯರು ಹೇಳಿದರು.

ಸುಪ್ರೀಂ ಕೋರ್ಟ್ ನಿಗದಿತ ಸಮಯ ಮೀರಿ ಪಟಾಕಿ ಸಿಡಿಸಿದ್ದಕ್ಕಾಗಿ ಚೆನ್ನೈ ಪೊಲೀಸರು 581 ಪ್ರಕರಣಗಳನ್ನು ದಾಖಲಿಸಿದ್ದಾರೆ.

ಏತನ್ಮಧ್ಯೆ, ಬೆಳಿಗ್ಗೆ 6 ರಿಂದ 7 ರವರೆಗೆ ಮತ್ತು ಸಂಜೆ 7 ರಿಂದ 8 ರವರೆಗೆ ಪಟಾಕಿ ಸಿಡಿಸಬಹುದು ಎಂದು ತಮಿಳುನಾಡು ಸರ್ಕಾರ ವಿಧಿಸಿರುವ ನಿಯಮಗಳನ್ನು ಉಲ್ಲಂಘಿಸಿದ ಜನರ ವಿರುದ್ಧ ಚೆನ್ನೈ ನಗರ ಪೊಲೀಸರು 581 ಪ್ರಕರಣಗಳನ್ನು ದಾಖಲಿಸಿದ್ದಾರೆ.

About The Author

Leave a Reply