October 12, 2025
WhatsApp Image 2023-11-23 at 9.12.10 AM

ಸಚಿವ ಬಿ.ಎ. ಜಮೀರ್ ಅಹ್ಮದ್ ಖಾನ್ ಅವರು ತೆಲಂಗಾಣ ಚುನಾವಣಾ ಪ್ರಚಾರಕ್ಕೆ ತೆರಳಿದ್ದು, ಅವರು ತಂಗಿದ್ದ ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಸಚಿವ ಜಮೀರ್‌ ಆಹ್ಮದ್‌ ಅವರು ನಾನು ತಂಗಿರುವ ಹೈದರಾಬಾದ್ ನಗರದ ಪಾರ್ಕ್ ಹಯಾತ್ ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿದರು, ಅವರಿಗೆ ಯಾವುದು ಸಿಗದೇ ವಾಪಸ್ಸು ಹೋದರು ಅಂತ ಹೇಳಿದ್ದಾರೆ.

 

ಇದೇ ವೇಳೆ ಅವರು ತಡರಾತ್ರಿ ನಡೆದ ದಾಳಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಕೇಂದ್ರದಲ್ಲಿನ ಬಿಜೆಪಿ ಮತ್ತು ರಾಜ್ಯದ ಬಿಆರ್‌ಎಸ್ ಸರ್ಕಾರವು ನಿರಾಶೆಗೊಂಡಿದೆ ಮತ್ತು ತೆಲಂಗಾಣ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಈ ದಾಳಿ ನಡೆಸಿದೆ. ಇದು ನಮ್ಮನ್ನು ಹೆದರಿಸುವ ಮತ್ತು ವಾಪಸ್ ಕಳುಹಿಸುವ ತಂತ್ರವಾಗಿದೆ, ಆದರೆ ನಾವು ಇದಕ್ಕೆ ಹೆದರುವುದಿಲ್ಲ ಅಂತ ಹೇಳಿದ್ದಾರೆ.

About The Author

Leave a Reply