November 8, 2025
WhatsApp Image 2024-04-01 at 11.07.17 AM

ಬಂಟ್ವಾಳ : ಈಜಲು ಹೋದ ಯುವಕ‌ ನೇತ್ರಾವತಿ ನದಿಯಲ್ಲಿ‌ ಮುಳುಗಿ ಮೃತಪಟ್ಟಿರುವ ಘಟನೆ ಬಂಟ್ವಾಳದ ಶಂಭೂರು ಬಳಿಯ ನೇತ್ರಾವತಿ ನದಿಯಲ್ಲಿ ನಡೆದಿದೆ. ಮೃತರನ್ನು ನರಿಕೊಂಬು ಗ್ರಾಮದ ಬೀರಕೋಡಿ ನಿವಾಸಿ ಯೋಗೀಶ್ ಪೂಜಾರಿ ಅವರ ಪುತ್ರ ಆನುಶ್ ಎಂದು ಗುರುತಿಸಲಾಗಿದೆ.

ನರಿಕೊಂಬು ಗ್ರಾಮದ ಪೊಯಿತಾಜೆ ಎಂಬಲ್ಲಿ ಈ ಘಟನೆ ನಡೆದಿದ್ದು, ಅನುಶ್ ತನ್ನ ಸಹೋದರ ರೂಪೇಶ್, ಸ್ನೇಹಿತರಾದ ಕಿಸಾನ್, ಅನೀಶ್ ಜೊತೆಯಲ್ಲಿ ನದಿಗೆ ಈಜಲು ತೆರಳಿದ್ದಾರೆ. ಈ ವೇಳೆ ಅನುಶ್ ನದಿಯಲ್ಲಿ ಮುಳುಗುತ್ತಿರುವ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯರು ನೀರಿಗೆ ಹಾರಿ ಯುವಕನನ್ನು ಬದುಕಿಸಲು ಪ್ರಯತ್ನಿಸಿದ್ದಾರೆ.

About The Author

Leave a Reply