November 8, 2025
WhatsApp Image 2024-07-03 at 2.05.47 PM

ಬೆಂಗಳೂರು : ಬಿಜೆಪಿಯವರು ನಿಜವಾದ ಹಿಂದೂಗಳೇ ಅಲ್ಲ, ಹಿಂದೂ ಹೆಸರಿನ ಫಲಾನುಭವಿಗಳು ಎಂದು ಎಂಎಲ್‌ ಸಿ ಬಿ.ಕೆ. ಹರಿಪ್ರಸಾದ್‌ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರನ್ನು ದೇವರೇ ಕ್ಷಮಿಸುವುದಿಲ್ಲ. ಅದಕ್ಕೆ ಲೋಕಸಭೆ ಚುನಾವಣೆಯಲಿ ಅಯೋಧ್ಯೆಯಲ್ಲಿ ಬಿಜೆಪಿಯನ್ನು ಜನರು ಓಡಿಸಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

 

ಇವರು ತ್ರಿವರ್ಣ ಧ್ವವನ್ನು ಒಪ್ಪುವುದಿಲ್ಲ. ತ್ರಿವರ್ಣ ಧ್ವಜವನ್ನು ವಿರೋಧಿಸುವವರು ದೇಶದ್ರೋಹಿಗಳು, ಸಂವಿಧಾನ ಬದಲಾವಣೆ ಬಗ್ಗೆ ಹೇಳುವವರು ದೇಶದ್ರೋಹಿಗಳು, ಆರ್‌ ಎಸ್‌ ಎಸ್‌ ತ್ರಿವರ್ಣ ಧ್ವಜವನ್ನು ಒಪ್ಪಲ್ಲ ಎಂದಿದ್ದರು. ಆರ್‌ ಎಸ್‌ ಎಸ್‌ ಅಂದರೆ ರೂಮರ್‌ ಸ್ಪ್ರೆಡರ್‌ ಎಂದರ್ಥ ಎಂದು ವಾಗ್ದಾಳಿ ನಡೆಸಿದ್ದಾರೆ.

About The Author

Leave a Reply