Visitors have accessed this post 308 times.
ಬೀದಿ ಬದಿಯ ವ್ಯಾಪಾರಿಗಳ ಮೇಲೆ ಮಂಗಳೂರು ನಗರ ಪಾಲಿಕೆ ಅಧಿಕಾರಿಗಳ ನಡೆಸುತ್ತಿರುವ ದಬ್ಬಾಳಿಕೆ ದೌರ್ಜನ್ಯ ವಿರುದ್ಧ ಅಲ್ಪಸಂಖ್ಯಾತ ಮತ್ತು ಹಿಂದುಳಿದ ಬೀದಿ ಬದಿಯ ವ್ಯಾಪಾರಸ್ಥರ ಸಂಘದ ಪ್ರಧಾನ ಕಾರ್ಯದರ್ಶಿ ರಿಯಾಝ್ ಹರೇಕಳ ತೀವ್ರವಾಗಿ ಖಂಡಿಸಿದ್ದಾರೆ
ಮಂಗಳೂರಿನಲ್ಲಿ ಪಾರ್ಕಿಂಗ್ ಮತ್ತು ಸೆಟ್ ಬ್ಯಾಕ್ ಲಿಫ್ಟ್ ಇಲ್ಲದ ಎಷ್ಟೋ ಕಟ್ಟಡಗಳಿವೆ ಅದಕ್ಕೆ ಟೈಗರ್ ಕಾರ್ಯಚರಣೆ ಯಾಕಿಲ್ಲ ಎಂದು ಮೇಯರ್ ಸುಧೀರ್ ಶೆಟ್ಟಿಗೆ ರಿಯಾಝ್ ಹರೇಕಳ ಪ್ರಶ್ನಿಸಿದ್ದಾರೆ
ಪಾಲಿಕೆಯ ಅಧಿಕಾರಿಗಳು ಬಡವರ ಮೇಲೆ ನಡೆಸುವ ದೌರ್ಜನ್ಯ ಖಂಡನೀಯ ದಕ್ಷಿಣ ಕನ್ನಡ ಉಸ್ತುವಾರಿ ಸಚಿವರ ಮೌನ ಸರಿಯಲ್ಲ ರಾಜ್ಯ ಕಾಂಗ್ರೆಸ್ ಸರ್ಕಾರ ಇದಕ್ಕೆ ನೇರ ಹೊಣೆ ನಮ್ಮ ಸಂಘಟನೆ ಬಡವರವಾಗಿ ನಿಲ್ಲುತ್ತದೆ ಬೀದಿ ವ್ಯಾಪಾರಿಗಳ ಎಲ್ಲಾ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ರಿಯಾಝ್ ಹರೇಕಳ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ