
ಮಂಜೇಶ್ವರ: ಮಗನೊಬ್ಬ ತನ್ನ ತಾಯಿಗೆ ಬೆಂಕಿ ಹಚ್ಚಿ ಕೊಲೆಗೈದ ಘಟನೆ ಮಂಜೇಶ್ವರ ತಾಲೂಕಿನ ವರ್ಕಾಡಿಯಲ್ಲಿ ಗುರುವಾರ ಮುಂಜಾನೆ ನಡೆದಿದೆ.

ಕೊಲೆ ಆರೋಪಿ ಮೆಲ್ವಿನ್ನನ್ನು ಬೈಂದೂರು ಹಾಗೂ ಕೊಲ್ಲೂರು ಠಾಣೆ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ಬೈಂದೂರಿನ ಕಾಲ್ತೋಡಿನಲ್ಲಿ ಬಂಧಿಸಿದ್ದಾರೆ

ಕೊಲೆಯಾದವರನ್ನು ಹಿಲ್ಡಾ (60) ಎಂದು ಗುರುತಿಸಲಾಗಿದೆ. ಪುತ್ರ ಮೆಲ್ವಿನ್ ಈ ಕೃತ್ಯ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ವೇಳೆ ನೆರೆಮನೆಯ ಲೋಲಿಟಾ (30) ಗಂಭೀರ ಗಾಯಗೊಂಡಿದ್ದಾರೆ.

ಹಿಲ್ಡಾ ಮತ್ತು ಮೆಲ್ವಿನ್ ಮಾತ್ರ ಮನೆಯಲ್ಲಿದ್ದರು. ಮಲಗಿದ್ದ ಹಿಲ್ಡಾ ಅವರ ಮೇಲೆ ಮಗ ಮೆಲ್ವಿನ್ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು. ಈ ವೇಳೆ ಹಿಲ್ಡಾ ಅವರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಆದರೆ ಸುಟ್ಟಗಾಯಗಳಿಂದ ಸಾವನಪ್ಪಿದ್ದಾರೆ ಎಂದು ಎಂದು ತಿಳಿದುಬಂದಿದೆ.
ಮಲಗಿದ್ದ ತಾಯಿಗೆ ಬೆಂಕಿ ಹಚ್ಚಿ ಕೊಂದ ಬಳಿಕ ತಾಯಿಗೆ ಹುಷಾರಿಲ್ಲ ಎಂದು ನೆರೆಮನೆಯ ಲೋಲಿಟಾರವರನ್ನು ಮನೆಗೆ ಕರೆಸಿದ್ದಾನೆ. ತಾಯಿ ಮತ್ತು ಮೆಲ್ವಿನ್ ಮಾತ್ರ ಮನೆಯಲ್ಲಿ ವಾಸವಾಗಿದ್ದರು. ಇನ್ನೋರ್ವ ಮಗ ಆಲ್ವಿನ್ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಕೃತ್ಯಕ್ಕೆ ಕಾರಣ ತಿಳಿದು ಬಂದಿಲ್ಲ.ಮೃತದೇಹ ಮನೆ ಸಮೀಪದ ಪೊದೆಯಲ್ಲಿ ಪತ್ತೆಯಾಗಿದೆ
ಗುರುವಾರ ಬೆಳಗ್ಗಿನ ಜಾವ 4ರಿಂದ 5 ಗಂಟೆಯ ನಡುವೆ ತಾಯಿಯನ್ನು ಕೊಲೆಗೈದಿರುವ ಮೆಲ್ವಿನ್ ಬಳಿಕ ಪರಾರಿಯಾಗಿದ್ದು, ಮಂಗಳೂರು, ಉಡುಪಿಯ ಮೂಲಕ ಕುಂದಾಪುರದತ್ತ ಬಂದಿದ್ದ. ಆತನ ಮೊಬೈಲ್ ನೆಟ್ವರ್ಕ್ ಮೇಲೆ ಕಣ್ಣಿಟ್ಟಿದ್ದ ಮಂಜೇಶ್ವರ ಪೊಲೀಸರಿಗೆ ಆತ ಕೊಲ್ಲೂರಿನತ್ತ ತೆರಳುತ್ತಿರುವ ಮಾಹಿತಿ ಲಭಿಸಿತು. ತತ್ಕ್ಷಣ ಕೊಲ್ಲೂರಿನ ಪೊಲೀಸರಿಗೆ ಮಾಹಿತಿ ನೀಡಿದರು
ಕೊಲ್ಲೂರು ಠಾಣೆಯ ಎಸ್ಐ ವಿನಯ್ ಕೊರ್ಲಹಳ್ಳಿ ನೇತೃತ್ವದ ಪೊಲೀಸರ ತಂಡ ಕ್ಷಿಪ್ರ ಕಾರ್ಯಾಚರಣೆಗಿಳಿದರು. ಆರೋಪಿಯು ಕುಂದಾಪುರದಿಂದ ಕೊಲ್ಲೂರಿಗೆ ಬಸ್ನಲ್ಲಿ ಹೊರಟಿದ್ದನು. ಆದರೆ ಕೊಲ್ಲೂರಿಗೆ ತೆರಳದೇ, ಹಾಲ್ಕಲ್ ಜಂಕ್ಷನ್ನಲ್ಲಿ ಇಳಿದು ಅಲ್ಲಿಂದ ರಿಕ್ಷಾದಲ್ಲಿ ಎಲ್ಲೂರು ಮೂಲಕ ಕಾಲ್ತೋಡಿಗೆ ತೆರಳಿದ್ದನು. ಗುರುವಾರ ಮಧ್ಯಾಹ್ನ 12ರಿಂದ 1 ಗಂಟೆಯ ಮಧ್ಯದ ಅವಧಿಯಲ್ಲಿ ಆತನನ್ನು ಸೆರೆ ಹಿಡಿದು ಕೇರಳ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.