

ಮಂಗಳೂರು : ಬಂದರು ಮತ್ತು ನೌಕಾಯಾನ ಕ್ಷೇತ್ರದ ಉತ್ಕೃಷ್ಟ ಸಾಧನೆಗಾಗಿ ನವ ಮಂಗಳೂರು ಬಂದರು ಪ್ರಾಧಿಕಾರಕ್ಕೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ಸೆಪ್ಟೆಂಬರ್ 18 ರಂದು ಬೆಂಗಳೂರಿನ ಎಂಜಿ ರಸ್ತೆಯ ಟ್ರಿನಿಟಿ ಎಟ್ ತಾಜ್ ಹೊಟೇಲ್ ಸಭಾಂಗಣದಲ್ಲಿ ಸಂಜೆ ನಡೆಯುವ ವರ್ಲ್ಡ್ ಎಚ್ಆರ್ಡಿ ಕಾಂಗ್ರೆಸ್ ನ 12 ನೇ ಅಧಿವೇಶನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ವೈಯಕ್ತಿಕ ವಿಭಾಗದಲ್ಲಿ ಬೃಹತ್ ಬಂದರುಗಳ ವಿಭಾಗದಲ್ಲಿ ವರ್ಷದ ಸಿಇಒ ಪ್ರಶಸ್ತಿಯನ್ನು ಎನ್ಎಂಪಿಎ ಗೆ ನೀಡಲಾಗಿದೆ ಎಂದು ಎನ್ಎಂಪಿಎ ಅಧ್ಯಕ್ಷ ಡಾ. ವೆಂಕಟರಮಣ ಅಕ್ಕರಾಜು ಅವರು ತಿಳಿಸಿದ್ದಾರೆ.






