November 8, 2025
WhatsApp Image 2025-11-04 at 9.17.23 AM

ಪುತ್ತೂರಿನ ಪರ್ಪುಂಜ ಅಬ್ರಾಡ್ ಹಾಲ್ ಬಳಿ ನವೆಂಬರ್ 1ರಂದು ಕಾರು ಮತ್ತು ರಿಕ್ಷಾ ಮುಖಾಮುಖಿಯಾಗಿ ಡಿಕ್ಕಿಯಾದ ಪರಿಣಾಮ ಮಹಿಳೆ ಹಾಗೂ ಮಗು ಸಾವನ್ನಪ್ಪಿದ ದುರ್ಘಟನೆ ಎಲ್ಲರನ್ನೂ ಕಳಕಳಿಗೊಳಿಸಿತು. ಆದರೆ ಈ ದುರ್ಘಟನೆಯ ಮಧ್ಯೆ ಮಾನವೀಯತೆಯ ಕಿರಣವಾಗಿ ಮೆರೆದವರು — ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಚಂದ್ರಪ್ರಭಾ ಗೌಡ.

ಘಟನೆ ತಿಳಿದ ಕೂಡಲೇ ಅವರು ಆಸ್ಪತ್ರೆಗೆ ಧಾವಿಸಿ ಗಾಯಾಳುಗಳ ಚಿಕಿತ್ಸೆಗೆ ಮುಂಚೂಣಿಯಲ್ಲಿ ನೆರವಾದರು. ಅಪಘಾತದಲ್ಲಿ ಗಾಯಗೊಂಡ 4 ತಿಂಗಳ ಹಸುಗೂಸಿನ ತಾಯಿ ಚಿಕಿತ್ಸೆಯಲ್ಲಿದ್ದರಿಂದ, ಚಂದ್ರಪ್ರಭಾ ಗೌಡ ತಾವೇ ಮಗುವಿನ ಆರೈಕೆಯನ್ನು ಕೈಗೊಂಡು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗೆ ಕರೆದೊಯ್ದು, ಸಿಟಿ ಸ್ಕ್ಯಾನ್ ಮಾಡಿಸಿ ಅದರ ವೆಚ್ಚವನ್ನೂ ಸ್ವತಃ ಭರಿಸಿದರು.

ಸಂಜೆಯಿಂದ ರಾತ್ರಿ 10ರವರೆಗೂ ಮಗುವಿನ ಆರೈಕೆಯಲ್ಲಿ ತೊಡಗಿಸಿಕೊಂಡ ಅವರು, ಮಾನವೀಯತೆಯ ನಿಜವಾದ ಅರ್ಥವನ್ನು ತೋರಿದರು. ಅವರ ಈ ಕೃತ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, “ಜಾತಿ ಧರ್ಮಕ್ಕಿಂತ ಮಾನವೀಯತೆ ಮುಖ್ಯ” ಎಂಬ ಸಂದೇಶವನ್ನು ಸಮಾಜಕ್ಕೆ ನೀಡಿದ್ದಾರೆ.

ಮಾನವೀಯತೆಯ ಹಾದಿ ಹಿಡಿದ ಚಂದ್ರಪ್ರಭಾ ಗೌಡ — ಪುತ್ತೂರಿನ ಹೆಮ್ಮೆ!

About The Author

Leave a Reply