

ಮಂಗಳೂರಿನ ಖಾಸಗಿ ಕಾಲೇಜಿನ ಓದುತ್ತಿರುವ ಕೇರಳ ಮೂಲದ ವಿಧ್ಯಾರ್ಥಿಯೋರ್ವ ನಾಪತ್ತೆಯಾಗಿರುವ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೇರಳ ಪಾಲಕ್ಕಾಡ್ ನಿವಾಸಿ, ಅಬೂಬಕರ್ ಎಂಬವರ ಪುತ್ರ ಮಾಲೀಕ್ ಅಬೂಬಕರ್ ನಾಪತ್ತೆಯಾಗಿರುವ ವಿದ್ಯಾರ್ಥಿ. ಈತ ದೇರಳಕಟ್ಟೆ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಪಿಜಿಯಲ್ಲಿ ವಾಸವಾಗಿದ್ದ.
ನವೆಂಬರ್ 13 ರಂದು ರಾತ್ರಿ ಊಟ ಮಾಡಿ ಬರುತ್ತೇನೆ ಎಂದು ಹೇಳಿ ಹೋದವ ವಾಪಸ್ ಪಿಜಿಗೆ ಬಾರದೆ ನಾಪತ್ತೆ ಆಗಿದ್ದಾನೆ. ಈ ಕುರಿತು ಮಾಲೀಕ್ ಅಬೂಬಕರ್ ಮಾವ ಅಝ್ಮಲ್ ಟಿ.ಎ. ನೀಡಿದ ದೂರಿನಂತೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






