

ಲಕ್ಕುಂಡಿ ನಿಧಿ ರಹಸ್ಯ ಬೆನ್ನಲ್ಲೇ 2022 ರಲ್ಲಿ ನಡೆದ ಒಂದು ವಂಚನೆ ಇದೀಗ ಬಯಲಾಗಿದೆ. 2022 ರಲ್ಲಿ ನಿಧಿ ಹುಡುಕಿ ಕೊಡುವುದಾಗಿ ವಂಚನೆ ಇದ್ದ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ ಉತ್ತರಾಖಂಡನ ಕಾಶಿಪುರದ ಹಜರತ್ ಮೌಲ್ವಿ ಬಂದಿದ ಆರೋಪಿ ಎಂದು ತಿಳಿದುಬಂದಿದೆ.
ನಿಧಿ ಪತ್ತೆ ಆಗಿದೆ ಎಂದು ಲಕ್ಕುಂಡಿ ಗ್ರಾಮದಾದ್ಯಂತ ವಿಷಯ ಹಬ್ಬಿತ್ತು. ಜಮೀನು ಮಾಲೀಕರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಾರೆ. ವಿಚಾರಣೆ ಮಾಡಿದಾಗ ನಿಧಿ ಹುಡುಕುವ ಮೋಸದಾಟ ಇದೀಗ ಬಯಲಾಗಿದೆ. ಸಣ್ಣಬಸಪ್ಪ ಮತ್ತು ದೊಡ್ಡಬಸಪ್ಪಗೆ ಹಾಜರತ್ ಮಾಲ್ವಿ, ವಂಚನೆ ಎಸಗಿದ್ದ ಎನ್ನುವುದು ತನಿಖೆಯ ವೇಳೆ ತಿಳಿದುಬಂದಿದೆ. 2022 ರಲ್ಲಿ ಇಬ್ಬರ ಜಮೀನಿನಲ್ಲಿ ನಿಧಿ ಪತ್ತೆಯಾಗಿದೆ ಎಂದು ವದಂತಿ ಹಬ್ಬಿತ್ತು.
ಸಣ್ಣ ಬಸಪ್ಪ ಮತ್ತು ದೊಡ್ಡಬಸಪ್ಪ ಎಂಬುವವರ ಜಮೀನಿನಲ್ಲಿ ನಿಧಿಪತ್ತೆಯಾಗಿದೆ ಎಂದು ಹಬ್ಬಿತ್ತು. ಇದೀಗ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದ ವಿಚಾರಣೆ ನಡೆಸಿದಾಗ ವಂಚನೆ ಕೃತಿಯ ಬಯಲಾಗಿದೆ ಹಾರೋಡಿ ಗುಂಡಿಯೊಳಗೆ ಹಂಡೆಯಲ್ಲಿ ಚಿನ್ನವಿಟ್ಟು ಹಿತ ನಂಬಿಸಿದ್ದ ನಿಧಿ ಸಿಕ್ಕಿದೆ ಅಂತ ಹೇಳಿ 20 ಲಕ್ಷಕ್ಕೆ ಮಾಲ್ವಿ ಬೇಡಿಕೆ ಇಟ್ಟಿದ್ದಾನೆ ಹಣ ನೀಡಲು ಜಮೀನು ಮಾಲೀಕರು ನಿರಾಕರಣೆ ಮಾಡಿದ್ದಾರೆ ಆಗ ಈ ಒಂದು ಪ್ರಕರಣ ಬೆಳಕಿಗೆ ಬಂದಿದೆ.
ಮೌಲ್ವಿಯನ್ನು ಲಕ್ಕುಂಡಿಗೆ ಬಸಿರಾ ಎಂಬ ಮಹಿಳೆ ಕರೆಸಿದಳು. ಮಾಟ ಮಂತ್ರ ಮತ್ತು ನಿಧಿ ತೆಗೆಯುವುದು ಗೊತ್ತು ಅಂತ ಮೌಲ್ವಿ ಹೇಳಿದ್ದ ಸಣ್ಣಬಸಪ್ಪ ಮತ್ತು ದೊಡ್ಡಬಸಪ್ಪಗೆ ನಿಧಿ ಇದೆ ಎಂದು ಆತ ನಂಬಿಸಿದ್ದ ಹಳೆ ಬಿಂದಿಗೆ ಮತ್ತು ಹಂಡೆಯನ್ನು ಅಂಗಡಿಯಲ್ಲಿ ಖರೀದಿಸಿದ್ದ ಜಮೀನಿನಲ್ಲಿ ಹಂಡೆ ಇಟ್ಟು ನಿಧಿ ಸಿಕ್ಕಿದೆ ಅಂತ ವಿಡಿಯೋ ಮಾಡುತ್ತಾನೆ. ಒಳಿಕ 20 ಲಕ್ಷಕ್ಕೆ ಜಮೀನು ಮಾಲೀಕರಿಗೆ ಬೇಡಿಕೆ ಇಡುತ್ತಾನೆ ಆಗ ಜಮೀನು ಮಾಲೀಕರು ನಿರಾಕರಿಸುತ್ತಾರೆ. ಬಳಿಕ ಅಲ್ಲಿಂದ ಆತ ಕೋಪಗೊಂಡು ತೆರಳುತ್ತಾನೆ. ಇದೀಗ ತಮಿಳು ಮಾಲೀಕರನ್ನು ಪೊಲೀಸರು ವಶಕ್ಕೆ ಪಡೆದ ವಿಚಾರ ನಡೆಸಿದಾಗ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ಪೊಲೀಸರು ಆತನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.






