

ಹಾಸನ :ಬೈಕ್ ಅಪಘಾತಗೊಂಡು ಓರ್ವ ಸಾವನ್ನಪ್ಪಿ ಮತ್ತೊರ್ವ ಗಂಭೀರ ಗಾಯಗೊಂಡ ಘಟನೆ ಹಾಸನದಲ್ಲಿ ನಡೆದಿದೆ.
ಜಿಲ್ಲೆಯ ಅರಸೀಕೆರೆ ತಾಲೂಕಿನ ಚಾಮರಾಜಾಪುರದ ಮೃತ ಚಿರಂಜೀವಿ ವಯಸ್ಸು 24 ವರ್ಷ ಹಾಗು ಸುನಿಲ್ 30 ವರ್ಷ, ಅರಸೀಕೆರೆ ತಾಲೂಕಿನ ಚಾಮರಾಜಪುರದ ವಾಸಿಗಳೆಂದು ತಿಳಿದುಬಂದಿದೆ.

(ಮಾ.14) ಶನಿವಾರದಂದು ಈ ಘಟನೆ ತಾಲೂಕಿನ ಚಿನ್ನೇನಹಳ್ಳಿ ಕ್ರಾಸ್ ಬಳಿ ಸಂಜೆ ಸುಮಾರು 4-36 ವೇಳೆಗೆ ಈ ದುರ್ಗಟನೆ ನಡೆದಿದ್ದು ಚಿರಂಜೀವಿ ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದು ಇನ್ನೋರ್ವ ಸುನಿಲ್ ಎಂಬಾತನನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಸಂಭಂದಿಕರು ತಿಳಿಸಿದರು, ಸುನಿಲ್ ಕೋಮದಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ಬಗ್ಗೆ ಇನ್ನಷ್ಟು ಮಾಹಿತಿ ಪೋಲೀಸರ ತನಿಖೆಯಿಂದ ತಿಳಿಯ ಬೇಕಾಗಿದೆ.








