Visitors have accessed this post 444 times.

ಪುತ್ತೂರು: ಸರ್ವೆ ಹೊಳೆಗೆ ಯುವಕ ಹಾರಿರುವ ಶಂಕೆ! ಮೊಬೈಲ್ ಪರ್ಸ್ ಸಹಿತ ದ್ವಿಚಕ್ರ ವಾಹನ ಪತ್ತೆ |

Visitors have accessed this post 444 times.

ಪುತ್ತೂರು : ಕುದ್ಮಾರು ಗ್ರಾಮದ ಯುವಕನೋರ್ವ ಕಾಣೆಯಾಗಿದ್ದು, ಸರ್ವೆ ಗೌರಿ ಸೇತುವೆ ಸಮೀಪ ಆತನ ಮೊಬೈಲ್, ಪರ್ಸ್, ದ್ವಿಚಕ್ರ ವಾಹನ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಯುವಕ ಗೌರಿ ಹೊಳೆಗೆ ಹಾರಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸಿದ್ದಾರೆ.

ಯುವಕ ಹೊಳೆಗೆ ಹಾರಿದ್ದಾನೆಯೇ ಅಥವಾ ಬೇರೆ ಕಡೆ ತೆರಳಿದ್ದಾನೆಯೇ ಎಂಬ ಸಂಶಯವೂ ವ್ಯಕ್ತವಾಗಿದೆ.

ಸ್ಥಳಕ್ಕೆ ಅಗ್ನಿ ಶಾಮಕದಳದವರು ಆಗಮಿಸಿದ್ದು, ಪೊಲೀಸರು ರಾತ್ರಿಯೇ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *