Visitors have accessed this post 217 times.
ಖಿದ್ಮತುಲ್ ಇಸ್ಲಾಂ ಅಸೋಸಿಯೇಷನ್ ಸಾಂಬಾರ ತೋಟ ಇದರ ನೂತನ ಅಧ್ಯಕ್ಷರಾಗಿ ನ್ಯಾಯವಾದಿ ಮಹಮ್ಮದ್ ಅಸ್ಗರ್ ಆಯ್ಕೆಯಾಗಿದ್ದಾರೆ.
ಖಿದ್ಮತುಲ್ ಇಸ್ಲಾಂ ಅಸೋಸಿಯೇಷನ್ ಸಾಂಬಾರ ತೋಟ ಇದರ ವಾರ್ಷಿಕ ಮಹಾ ಸಭೆಯು ಸ್ವಲಾಹುದ್ದೀನ್ ಮದರಸ ಸಂಬಾರತೋಟದಲ್ಲಿ ಸಭಾ ಅಧ್ಯಕ್ಷರಾದ ನಸೀರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ನ್ಯಾಯವಾದಿ ಮಹಮ್ಮದ್ ಅಸ್ಗರ್ ರವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಝಾಹಿದ್, ಪ್ರಧಾನ ಕಾರ್ಯದರ್ಶಿಯಾಗಿ ಜಲಾಲ್ ಕೊಡಕಲ್ಲು, ಜೊತೆ ಕಾರ್ಯದರ್ಶಿಯಾಗಿ ಶರೀಫ್. ಪಿ.ಎಮ್ ಹಾಗೂ ಸಂಸುದ್ದೀನ್, ಖಜಾಂಜಿ ಸಾವುಲ್ ಹಮೀದ್, ಸಂಘಟನಾ ಕಾರ್ಯದರ್ಶಿ ತಪ್ಸೀರ್ ಇಬ್ರಾಹಿಂ ಲೆಕ್ಕಪರಿಶೋಧಕನಾಗಿ ನಿಯಾಜ್ ರವರನ್ನು ಆಯ್ಕೆ ಮಾಡಲಾಯಿತು. ರಿಯಾಜ್ ಯು.ಕೆ, ನಿಝರ್, ಸೇಫ್ವಾನ್,ಇರ್ಷಾದ್, ಮಜೀದ್ ರವರನ್ನು ಕಾರ್ಯಕಾರಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು.