
ಗ್ರಾಮ ಸ್ವರಾಜ್ ಪ್ರತಿಷ್ಠಾನ (ರಿ) ದ ಕ ಜಿಲ್ಲೆ ಮಂಗಳೂರು ಇದರ ವತಿಯಿಂದ ದ ಕ ಜಿ ಪಂ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕುಳಾಲು ಕೊಳ್ನಡು ಬಂಟ್ವಾಳ ತಾಲೂಕು
ಶಾಲೆಯ ಎಲ್ಲಾ ಮಕ್ಕಳಿಗೂ ಉಚಿತ ನೋಟ್ ಪುಸ್ತಕ ವಿತರಣೆ

. ಗ್ರಾಮ ಸ್ವರಾಜ್ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಯುತ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಕೊಳ್ನಾಡು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀ ಯುತ ಅಶ್ರಫ್, ಗ್ರಾಮ ಪಂಚಾಯಿತಿಯ ಸ್ಥಳೀಯ ಸದಸ್ಯರಾದ ಶ್ರೀ ಮತಿ ರತ್ನ, ಶ್ರೀಮತಿ ಭಾಗೀರಥಿ, ಶ್ರೀಮತಿ ಸಂಜೀವಿ, ಹಾಗೂ SDMC ಅಧ್ಯಕ್ಷರಾದ ಶ್ರೀ ಯುತ ಶರೀಫ್… ಇವರು ಭಾಗವಹಿಸಿದ್ದರು.

ಶ್ರೀ ಯುತ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಇವರು.. ಅಧ್ಯಕ್ಷೀಯ ಭಾಷಣ ಮಾಡುತ್ತಾ .. ನಾನು ಕಲಿತ ಶಾಲೆಯ ಅಭಿವೃದ್ಧಿಗಾಗಿ, ತಾವು ಒದಗಿಸಿರುವ ಸೌಲಭ್ಯಗಳ ಬಗ್ಗೆ ವಿವರಿಸುತ್ತಾ… ಶಾಲೆಯ ಅಭಿವೃದ್ಧಿಗಾಗಿ ಈ ಕಳೆದ ವರ್ಷ ಸುಮಾರು 13 ಲಕ್ಷ ರೂಪಾಯಿಗಳ ಅನುದಾನವನ್ನು ಒದಗಿಸಿ ಕೊಟ್ಟಿದ್ದೇನೆ ಎಂದು…ನೆನಪಿಸಿಕೊಳ್ಳುತ್ತಾ …ಪೋಷಕರು ತಮ್ಮ ಮಕ್ಕಳನ್ನು ನಮ್ಮ ಶಾಲೆಗೆ ದಾಖಲಾತಿ ಮಾಡಿ ಕನ್ನಡ ಮಾಧ್ಯಮದ ಹಳ್ಳಿ ಪ್ರದೇಶಗಳ ಶಾಲೆಗಳನ್ನು ಉಳಿಸಲು ಸತತ ಪ್ರಯತ್ನ ಮಾಡಬೇಕೆಂದು… ಕಿವಿ ಮಾತು ಹೇಳಿದರು….
ಕಾರ್ಯಕ್ರಮವನ್ನು ಶಾಲಾ ಶಿಕ್ಷಕರಾದ ತೌಸೀಫ್ ಅಹ್ಮದ್ ರವರು.. ನಿರೂಪಿಸಿದರು…
ಶಾಲೆಯ ಮುಖ್ಯ ಶಿಕ್ಷಕಿಯಾದ ಶ್ರೀಮತಿ ತಿಮ್ಮು… ಸ್ವಾಗತಿಸಿದರೆ…. ಶಿಕ್ಷಕರಾದ ಶ್ರೀ ಪರಮೇಶ್ವರ್ ಇವರು… ಪ್ರಾಸ್ತಾವಿಕ ಮಾತುಗಳನ್ನಾಡಿದರು…
ಶಿಕ್ಷಕರಾದ ಶ್ರೀ ಹೇಮ ಎಂ ಟಿ.. ಇವರ ಧನ್ಯವಾದ ಸಮರ್ಪಣೆ ಯೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು…..
