Visitors have accessed this post 416 times.
ಬಂಟ್ವಾಳ : ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಸುವರ್ಣ ಕನ್ನಡ ರಾಜ್ಯೋತ್ಸವವು ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರಾಧ್ಯಕ್ಷರಾದ ಮೂನಿಶ್ ಅಲಿ ಯವರ ಅದ್ಯಕ್ಷತೆಯಲ್ಲಿ ಪಕ್ಷದ ಕೈಕಂಬ ಕಛೇರಿ ಮುಂಭಾಗ ಧ್ವಜಾರೋಹಣದ ಮಾಡುವ ಮೂಲಕ ನಡೆಯಿತು.
ಧ್ವಜಾರೋಹಣದ ಬಳಿಕ ರಾಜ್ಯ ಸಮಿತಿ ಸದಸ್ಯರಾದ ಅಕ್ವರ್ ಅಲಿ ಪೊನ್ನೋಡಿ ನೆರವೇರಿಸಿ ಶುಭ ಹಾರೈಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ಯೂಸುಫ್ ಆಲಡ್ಕ, ಕ್ಷೇತ್ರ ಸಮಿತಿ ಜೊತೆ ಕಾರ್ಯದರ್ಶಿ ಮುಬಾರಕ್ ಗೂಡಿನಬಳಿ, ಸಮಿತಿ ಸದಸ್ಯರಾದ ಶಾಹುಲ್ ಎಸ್ ಎಚ್ ಇರ್ಫಾನ್ ತುಂಬೆ, ಶಾಕಿರ್ ತಲಪಾಡಿ ಮತ್ತು ಸ್ಥಳೀಯ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಅಶ್ರಫ್ ತಲಪಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.