Visitors have accessed this post 993 times.

ದ.ಕ.‌ಜಿಲ್ಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ: ಜೆಡಿಎಸ್ ಬಂಟ್ವಾಳ‌ ಮೈನಾರಿಟಿ ಅಧ್ಯಕ್ಷ ಮುಹಮ್ಮದ್ ಶಫೀಕ್ ಆಲಡ್ಕ

Visitors have accessed this post 993 times.

ಬಂಟ್ವಾಳ :- ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ‌ ರಾಜ್ಯ ಜೆಡಿಎಸ್ ಘಟಕವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡರೂ ಬಂಟ್ವಾಳ ತಾಲೂಕಿನಾದ್ಯಂತ ಜೆಡಿಎಸ್ ಕಾರ್ಯಕರ್ತರು, ಅಭಿಮಾನಿಗಳು , ಸಮಾನ‌‌ ಮನಸ್ಕ ಪಕ್ಷ‌ಗಳೊಂದಿಗೆ ಕೂಡಿ ಜಾತ್ಯಾತೀತ ಮತಗಳು ಹಂಚಿಹೋಗದಂತೆ ತಡೆಯುವ ಏಕೈಕ ಉಧ್ಧೇಶದಿಂದ ಈ ಬಾರಿ ಕಾಂಗ್ರೆಸ್ ಪಕ್ಷದ ಸಮರ್ಥ ಅಭ್ಯರ್ಥಿಯಾದಂತಹ ಪದ್ಮರಾಜ್ ರಾಮಯ್ಯ ಪೂಜಾರಿಯವರನ್ನು ಆಯ್ಕೆಮಾಡುವಂತೆ ಬಂಟ್ವಾಳ‌ ತಾಲೂಕು ಜೆಡಿಎಸ್ ಮೈನಾರಿಟಿ ವಿಭಾಗದ ಅಧ್ಯಕ್ಷರಾದಂತಹ ಮುಹಮ್ಮದ್ ಶಫೀಕ್ ಆಲಡ್ಕ ಕರೆ ನೀಡಿದ್ದಾರೆ‌.
ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿ ಬ್ರಿಜೇಶ್ ಚೌಟ ಈ ಹಿಂದೆ ಸಮಾರಂಭವೊಂದರಲ್ಲಿ ಹಿಂದುತ್ವದ ವಿಚಾರದ ಬಗ್ಗೆ ಪ್ರತಿಪಾದಿಸಿದ್ದು, ಜಾತ್ಯಾತೀತ ಒಳವುಲ್ಲ ಜೆಡಿಎಸ್ ಕಾರ್ಯಕರ್ತರಿಗೆ ತೀವ್ರ ನೋವಾಗಿದ್ದು , ಜಿಲ್ಲೆಯ ಅಲ್ಪಸಂಖ್ಯಾತರ ಹಿತಾಸಕ್ತಿಯನ್ನು ಗಮಮನದಲ್ಲಿಟ್ಟುಕೊಂಡು ಈ ನಿರ್ಧಾರಕ್ಕೆ ಬರಲಾಗಿದೆಯೆಂದು ಅವರು ಈ ಸಂಧರ್ಭ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *