Visitors have accessed this post 764 times.

ಮಂಗಳೂರು: ಪ್ರಯಾಣಿಕರೆದುರೇ ಹೊಡೆದಾಡಿಕೊಂಡ ಖಾಸಗಿ ಬಸ್ ಚಾಲಕ – ನಿರ್ವಾಹಕರು

Visitors have accessed this post 764 times.

ಮಂಗಳೂರು: ಬಸ್‌ನೊಳಗಡೆ ಪ್ರಯಾಣಿಕರು ಇದ್ದಾಗಲೇ ಖಾಸಗಿ ಬಸ್‌ಗಳ ಚಾಲಕ-ನಿರ್ವಾಹಕರು ಹೊಡೆದಾಡಿಕೊಂಡು ಮೃಗೀಯವಾಗಿ ವರ್ತಿಸಿರುವ ಘಟನೆ ಮಂಗಳೂರಿನ ಬಲ್ಮಠದ ಬಳಿ ನಡೆದಿದೆ. ಬಸ್‌ನೊಳಗಡೆ ಇದ್ದ ವೀಡಿಯೋದಲ್ಲಿ ಇವರ ಹೊಡೆದಾಟದ ದೃಶ್ಯ ಸೆರೆಯಾಗಿದೆ. ಓರ್ವ ಬಸ್ ಚಾಲಕನು ಉಗುಳಿದ್ದು, ಮತ್ತೊಂದು ಚಾಲಕನ ಮೇಲೆ ಬಿದ್ದಿದೆ ಎಂದು ಆರೋಪಿಸಿ ವಿಟ್ಲ-ಮಂಗಳೂರಿಗೆ ಬರುವ ಖಾಸಗಿ ಬಸ್ ಚಾಲಕ-ನಿರ್ವಾಹಕರ ನಡುವೆ ಹೊಡೆದಾಟ ನಡೆದಿದೆ. ಉಗುಳಿದ್ದು ತನ್ನ ಮೈಮೇಲೆ ಬಿದ್ದಿದೆ ಎಂದು ನಿರ್ವಾಹಕ ಮತ್ತೊಂದು ಬಸ್‌ನೊಳಗಡೆ ನುಗ್ಗಿ ಅದರ ಡ್ರೈವರ್ ಅನ್ನು ಎಳೆದುಹಾಕಿ ಹೊಡೆದಾಟ ನಡೆದಿದೆ. ಈ ವೇಳೆ ಓರ್ವನು ಸ್ಕೂಡ್ರೈವರ್‌ನಲ್ಲಿ ಚುಚ್ಚಿ ಹಲ್ಲೆಗೆ ಯತ್ನ ನಡೆದಿದೆ. ಬಸ್‌ನೊಳಗಡೆ ಪ್ರಯಾಣಿಕರಿದ್ದಾಗಲೇ ಚಾಲಕ-ನಿರ್ವಾಹಕರು ರೌಡಿ ಕಾಳಗ ನಡೆಸಿದ್ದಾರೆ. ಪ್ರಯಾಣಿಕರೊಂದಿಗೂ ರೌಡಿಗಳ ರೀತಿ ವರ್ತಿಸಿದ್ದಾರೆ. ಈ ಬಗ್ಗೆ ನಗರದ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಈವರೆಗೆ ಆರೋಪಿಗಳ ಬಂಧನವಾಗಿಲ್ಲ. ಖಾಸಗಿ ಬಸ್ ಸಿಬ್ಬಂದಿಯ ವರ್ತನೆಗೆ ಲಗಾಮಿಲ್ಲದಿದ್ದರೂ, ಪ್ರಯಾಣಿಕರಿಂದ‌ ನಿರಂತರ ದೂರಿದ್ದರೂ ಆರ್ ಟಿ ಒ ಸುಮ್ಮನಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

Leave a Reply

Your email address will not be published. Required fields are marked *