October 21, 2025
WhatsApp Image 2024-10-29 at 10.26.18 AM

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಶಾಕಿಂಗ್ ಘಟನೆಯೊಂದು ನಡೆದಿದ್ದು, ನಿಧಿ ಆಸೆಗಾಗಿ ಪಾಪಿ ತಂದೆಯೊಬ್ಬ ಸ್ವಂತ ಮಗನನ್ನೇ ಬಲಿಕೊಡಲು ಯತ್ನಿಸಿದ ಘಟನೆ ನಡೆದಿದೆ.

ಬೆಂಗಳೂರಿನ ಕೆ.ಆರ್.ಪುರಂನಲ್ಲಿ ಈ ಘಟನೆ ನಡೆದಿದ್ದು, ಕುಟ್ಟಿ ಸೈತಾನ್ ಪೂಜೆಗೆ ಮಗು ಬಲಿ ಕೊಡಲು ತಂದೆ ಯತ್ನಿಸಿದ್ದಾನೆ.

ಈ ವೇಳೆ ಪತ್ನಿ ತಡೆದಿದ್ದು, ಬಳಿಕ ದೂರು ನೀಡಿದ್ದಾಳೆ.

ಬೆಂಗಳೂರಿನ ಕೆ.ಆರ್.ಪುರಂನ ಸದ್ದಾಂ ಎಂಬಾತ ನಿಧಿ ಆಸೆಗೆ ಮಗನನ್ನೇ ಬಲಿಕೊಡಲು ಯತ್ನಿಸಿದ್ದಾನೆ. ತಡರಾತ್ರಿ ಮಂತ್ರ ಪಠಿಸುತ್ತಾ ವಾಮಾಚಾರದ ಬಗ್ಗೆ ಅಭ್ಯಾಸ ಮಾಡುತ್ತಿದ್ದ. ಪತಿ ಸದ್ದಾಂ ಕಿರುಕುಳ ಬೇಸತ್ತು ಮಹಿಳೆ ಪೊಲೀಸ್ ಆಯುಕ್ತ ದಯಾನಂದ್ ಗೆ ದೂರು ನೀಡಿದ್ದಾಳೆ.

About The Author

Leave a Reply