October 13, 2025
WhatsApp Image 2024-12-19 at 11.17.35 AM

ಸಾಹಿತ್ಯ ಸಂಸ್ಕೃತಿ ಕಲೆ ಸಂಘಟನೆ ಸದ್ವಿಚಾರ ಎಂಬ ನೆಲೆಯಲ್ಲಿ ಕಳೆದ 25 ವರ್ಷಗಳಿಂದ ಪುಸ್ತಕ ಪ್ರಕಟನೆಯಲ್ಲಿ ಸಕ್ರಿಯವಾಗಿರುವ ಕಲ್ಲಚ್ಚು ಪ್ರಕಾಶನದ ಬೆಳ್ಳಿ ಹಬ್ಬ ಜನವರಿ 5ರ “ರಜತ ರಂಗು” ಸಮಾರಂಭದಲ್ಲಿ ಸಾಹಿತ್ಯ ಮತ್ತು ಪೂರಕ ಕ್ಷೇತ್ರದ ರಾಜ್ಯ ಮತ್ತು ಹೊರರಾಜ್ಯದ ಈ ಕೆಳಗಿನ 25 ಸಾಧಕರಿಗೆ ಗೌರವಾರ್ಪಣೆ ನಡೆಯಲಿದೆ. ಮೇಜರ್ ಡಾ. ಕುಶ್ವಂತ್ ಕೋಳಿಬೈಲು ಮಡಿಕೇರಿ, ಡಾ. ಪ್ರಸನ್ನ ಕೆ. ಸಂತೇಕಡೂರು ಮೈಸೂರು , ಡಾ. ಕೊಳ್ಚಪ್ಪೆ ಗೋವಿಂದ ಭಟ್ ಮಂಗಳೂರು, ವಿಕ್ರಂ ಕಾಂತಿಕೆರೆ ಮಂಗಳೂರು, ರಾಘವೇಂದ್ರ ಅಗ್ನಿಹೋತ್ರಿ ಮಂಗಳೂರು, ಸಂಪತ್ ಸಿರಿಮನೆ ಶೃಂಗೇರಿ, ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಮಂಗಳೂರು, ಹಂಝ ಮಲಾರ್ ಮಂಗಳೂರು, ಎಡ್ವರ್ಡ್ ಲೋಬೊ ತೊಕ್ಕೊಟ್ಟು, ರಾಘವೇಂದ್ರ ಬಿ. ರಾವ್ – ಅನು ಬೆಳ್ಳೆ ಕಾರ್ಕಳ, ಮಹಮ್ಮದ್ ಅಶೀರುದ್ದೀನ್ ಸಾರ್ತಬೈಲು ಮಂಗಳೂರು, ನಾರಾಯಣ ಕುಂಬ್ರ ಪುತ್ತೂರು, ಮಧುರಾ ಕರ್ಣಮ್ ಬೆಂಗಳೂರು ( ಎಲ್ಲರೂ ಸಾಹಿತ್ಯ ಕ್ಷೇತ್ರ) ಡಾ. ಮೋನಾ ಮೆಂಡೋನ್ಸಾ ಮಂಗಳೂರು, ಪುಷ್ಪಲತಾ ಪ್ರಭು ಕೊಂಚಾಡಿ ಮಂಗಳೂರು ( ಬಹುಮುಖ ಪ್ರತಿಭೆ) ಪಯ್ಯನ್ನೂರು ರಮೇಶ್ ಪೈ ಕೇರಳ, ಬಿ. ಎನ್. ವಾಸರೆ ದಾಂಡೇಲಿ, ( ಸಾಹಿತ್ಯ ಸಂಘಟನೆ) ಸುಶೀಲನ್ ಮೋಡಿಯಿಲ್ ಉಡುಪಿ, ಜಗದೀಶ ಭಂಡಾರಿ ಮಂಗಳೂರು, ವಿಭಾ ಶ್ರೀನಿವಾಸ್ ನಾಯಕ್ ಮಂಗಳೂರು ( ಸಂಗೀತ ಕ್ಷೇತ್ರ) ಶ್ವೇತಾ ಅರೆಹೊಳೆ ( ನೃತ್ಯ) , ಕೆ. ಲಕ್ಷ್ಮೀನಾರಾಯಣ ಮಂಗಳೂರು ( ಕಲೆ) ಕ್ರಿಸ್ಟೋಫರ್ ಜೋನ್ ಡಿಸೋಜ ಮಂಗಳೂರು (ನಾಟಕ) ಪ್ರಕಾಶ ಇಳಂತಿಲ ಮಂಗಳೂರು ( ಮಾಧ್ಯಮ) ವಿದ್ಯಾ ಯು. ಇಡ್ಕಿದು ಮಂಗಳೂರು ( ಪ್ರಕಾಶನ). ಇದೆ ಸಂದರ್ಭದಲ್ಲಿ ಕಲ್ಲಚ್ಚು ಪ್ರಕಾಶನದ ಕಳೆದ 15 ಆವೃತ್ತಿಯ ಕಲ್ಲಚ್ಚು ಪ್ರಶಸ್ತಿ ಪುರಸ್ಕೃತರಿಗೆ ಮತ್ತು ಲೇಖಕ ಬಳಗದ ಎಲ್ಲರಿಗೂ ಸಹ ಅಭಿನಂದನೆಗಳನ್ನು ಆತಿಥಿಗಳ ಸಮ್ಮುಖದಲ್ಲಿ ಆಯೋಜಿಸಿಲಾಗಿದೆಯೆಂದು ಪ್ರಕಾಶನದ ವ್ಯವಸ್ಥಾಪಕ ಮುಖ್ಯಸ್ಥ ಸಾಹಿತಿ ಮಹೇಶ ಆರ್. ನಾಯಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

About The Author

Leave a Reply