October 20, 2025
rt

ಮಂಗಳೂರು: ಕ್ಷುಲ್ಲಕ ಕಾರಣವೊಂದಕ್ಕೆ ನಾಲ್ಕು ಜನರ ತಂಡದಿಂದ ಇಬ್ಬರಿಗೆ ಮರಣಾಂತಿಕ ಹಲ್ಲೆ ನಡೆಸಿದ ಘಟನೆ ನಗರದ ಅತ್ತಾವರದಲ್ಲಿ ನಡೆದಿದೆ.

ಮಾರ್ಜುಕ್ ಎಂಬಾತ ಎರಡು ತಿಂಗಳ ಹಿಂದೆ ಪುತ್ತೂರಿನಿಂದ ಕ್ವಿಡ್ ಕಾರು ಖರಿದಿಸಿದ್ದು, ಅದರ ಲೋನ್ ಹಣವನ್ನು ಸರಿಯಾಗಿ ಪಾವತಿಸಿದ್ದ, ಆದರೆ ಅದರ ಮಾಲಿಕ ಸುಮ್ಮನೆ ಕಾರು ವಿಚಾರದಲ್ಲಿ ತಕರಾರು ತೆಗೆಯುವುತ್ತಿದ್ದ. ಈ ಹಿನ್ನಲೇ ಇಂದು ಮಾರ್ಜುಕ್ ಇದ್ದ ಪ್ಲಾಟ್ ಗೆ ನಾಲ್ಕು ಮಂದಿ ರೌಡಿಗಳನ್ನು ಬಿಟ್ಟು ಮರಣಾಂತಿಕ ಹಲ್ಲೆ ನಡೆಸಿ ಕಾರುನ್ನು ತೆಗೆದುಕೊಂಡು ಹೋಗಿದ್ದಾರೆ.
ಹಲ್ಲೆಗೆ ಒಳಗಾದ ಮಾರ್ಜುಕ್ ಮತ್ತು ಅನಸ್ ಗೆ ಗಂಭೀರ ಗಾಯಗಳಾಗಿದ್ದು ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಈ ಬಗ್ಗೆ ಇನ್ನಷ್ಟು ಮಾಹಿತಿ ನಿರೀಕ್ಷಿಸಲಾಗಿದೆ.

About The Author

Leave a Reply