March 4, 2026
WhatsApp Image 2026-03-04 at 12.39.31 PM

 ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಕ್ಕೆ ಸಂಬಂಧಿಸಿದಂತೆ, ಜಿಲ್ಲೆಯ ಗಂಗಾವತಿಯಲ್ಲಿ ಹಿಂದೂ ಯುವಕನ ಮೇಲೆ ಅನ್ಯಕೋಮಿನ ಗುಂಪೊಂದು ಭೀಕರ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ.

ಘಟನೆಯ ವಿವರ

ಗಂಗಾವತಿ ನಗರದ ನಿವಾಸಿಯಾದ ಚಂದ್ರಶೇಖರ್ ಎಂಬ ಯುವಕ ಹಲ್ಲೆಗೊಳಗಾದವರು. ವೃತ್ತಿಯಲ್ಲಿ ಖರ್ಜೂರದ ವ್ಯಾಪಾರಿಯಾಗಿರುವ ಚಂದ್ರಶೇಖರ್, ಇತ್ತೀಚೆಗೆ ಇಸ್ರೇಲ್ ಮತ್ತು ಅಮೆರಿಕದ ದಾಳಿಯಲ್ಲಿ ಅಲಿ ಖಮೇನಿ ಸಾವನ್ನಪ್ಪಿದ್ದಾರೆ ಎಂಬ ಸುದ್ದಿಯನ್ನು ತನ್ನ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು.

ಹಲ್ಲೆ ಮತ್ತು ಬೆದರಿಕೆ:

ಈ ಪೋಸ್ಟ್‌ನಿಂದ ಆಕ್ರೋಶಗೊಂಡ ಐದಾರು ಮಂದಿ ಯುವಕರ ಗುಂಪು ಚಂದ್ರಶೇಖರ್ ವ್ಯಾಪಾರ ಮಾಡುತ್ತಿದ್ದ ಸ್ಥಳಕ್ಕೆ ನುಗ್ಗಿದೆ. “ನಮ್ಮ ಸಮಾಜದ ಮುಖಂಡರ ಬಗ್ಗೆ ಏಕೆ ಸ್ಟೇಟಸ್ ಹಾಕಿದ್ದೀಯಾ? ಇದರಿಂದ ನಮಗೆ ನೋವಾಗಿದೆ” ಎಂದು ಕಿರುಚಾಡಿದ ಗುಂಪು, ಯುವಕನ ಮೇಲೆ ಮನಬಂದಂತೆ ಹಲ್ಲೆ ನಡೆಸಿದೆ ಎನ್ನಲಾಗಿದೆ.
ಅಷ್ಟಕ್ಕೇ ನಿಲ್ಲದ ದುಷ್ಕರ್ಮಿಗಳು, ಚಂದ್ರಶೇಖರ್ ಮನೆಗೆ ನುಗ್ಗಿ ಹೊಡೆಯುವುದಾಗಿ ಮತ್ತು ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಪೊಲೀಸ್ ಠಾಣೆ ಮೆಟ್ಟಿಲೇರಿದ ಸಂತ್ರಸ್ತ:

ಗುಂಪಿನ ದಾಳಿ ಮತ್ತು ಬೆದರಿಕೆಯಿಂದ ತೀವ್ರ ಭಯಭೀತರಾದ ಚಂದ್ರಶೇಖರ್, ತಡರಾತ್ರಿಯೇ ಗಂಗಾವತಿ ನಗರ ಪೊಲೀಸ್ ಠಾಣೆಗೆ ಧಾವಿಸಿ ಕಿಡಿಗೇಡಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ.

About The Author

Leave a Reply