Visitors have accessed this post 290 times.

ವಿಟ್ಲ: ಶಿಕ್ಷಕರ ಕೊರತೆ ಮತ್ತು ಶೈಕ್ಷಣಿಕ ಮದ್ಯಬಾಗದಲ್ಲಿ ಶಿಕ್ಷಕರ ವರ್ಗಾವಣೆ ವಿರೋದಿಸಿ ಶಾಲಾ ಮಕ್ಕಳು ತರಗತಿ ಬಹಿಷ್ಕಾರ;ಸ್ಥಳಕ್ಕೆ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಂ.ಎಸ್.ಮಹಮ್ಮದ್, ಬಂಟ್ವಾಳ ಶಿಕ್ಷಣಾಧಿಕಾರಿ ಮಂಜುನಾಥನ್ ಎಮ್.ಜಿ ಬೇಟಿ ಮನವೊಲಿಕೆ; ಬೇಡಿಕೆ ಪೂರೈಕೆಯ ಭರವಸೆ

Visitors have accessed this post 290 times.

ಬಂಟ್ವಾಳ ತಾಲೂಕಿನ ವಿಟ್ಲಪಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕೋಡಪದವು ಇಲ್ಲಿನ ಶೈಕ್ಷಣಿಕ ಮದ್ಯದಲ್ಲಿ ಶಿಕ್ಷಕರ ವರ್ಗಾವಣೆ ಮತ್ತು ಶಾಲೆಯ ಮಕ್ಕಳಿಗೆ ಅನುಗುಣವಾಗಿ ಶಿಕ್ಷಕರ ಕೊರತೆಯನ್ನು ಎದುರಿಸುವ ಬಗ್ಗೆ ಮಕ್ಕಳು ತರಗತಿ ಬಹಿಷ್ಕಾರಿಸಿ ಶಾಲೆಗೆ ಹಾಜರಾಗದೆ ಪ್ರತಿಭಟಿಸಿದ್ದಾರೆ, ಹಾಗೂ ಪೋಷಕರು ಶಾಲೆಯ ಗೇಟಿಗೆ ಬೀಗ ಜಡಿದು ಈ ತಾರತಮ್ಯ ನೀತಿ ಹಾಗೂ ನಮ್ಮ ಬೇಡಿಕೆ ಈಡೇರುವವರೆಗೂ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲವೆಂದು ತಾಲೂಕು ಶಿಕ್ಷಣಾಧಿಕಾರಿ ಸ್ಥಳಕ್ಕೆ ಬರುವವರೆಗೂ ಸ್ಥಳದಿಂದ ಕದಲುವುದಿಲ್ಲವೆಂದು ಪ್ರತಿಭಟನೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎಂ.ಎಸ್. ಮಹಮ್ಮದ್ ಬೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ಬಂಟ್ವಾಳ B.E.O ಅವರಲ್ಲಿ ಮಾತಾಡಿ ಉಡಾಫೆ ಉತ್ತರ ಲಭಿಸಿದಾಗ ಸ್ಥಳಕ್ಕೆ ಬರುವಂತೆ ತಾಕೀತು ಮಾಡಿದ ಘಟನೆಯೂ ನಡೆಯಿತು.ಅಲ್ಲದೆ ಎಂ.ಎಸ್.ಮಹಮ್ಮದ್ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತಾಡಿ ಮುಂದಿನ ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ಮೂಲಕ ಸೂಕ್ತ ಶಿಕ್ಷಕರ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರು.ನಂತರ ಮಾತಾಡಿದ SDMC ಸಮನ್ವಯ ವೇದಿಕೆ ಕರ್ನಾಟಕ ಇದರ ರಾಜ್ಯದ್ಯಕ್ಷರಾದ ಮೊಯ್ದಿನ್ ಕುಟ್ಟಿ ಮಾತಾಡಿ ಸರಕಾರಿ ಶಾಲೆಗಳು ಮುಚ್ಚುವ ಹಂತದಲ್ಲಿವೆ.ಶಿಕ್ಷಣ ಇಲಾಖೆಯು ಅವರ ಕೈಯಿಂದಲೇ ಸರಕಾರಿ ಶಾಲೆಗಳು ಮುಚ್ಚುವ ರೀತಿಯಲ್ಲಿ ಗುತ್ತಿಗೆ ಪಡೆದವರಂತೆ ವರ್ತಿಸುತ್ತಿದೆ.ಒಂದು ಶಾಲೆಯನ್ನು ಉಳಿಸಿ ಬೆಳೆಸುವಲ್ಲಿ ತನ್ನ ಶ್ರಮವನ್ನು ಹಾಕುವ SDMC ಯವರಿಗೆ ಪೂರಕವಾಗಿ ಇಲಾಖೆಯು ಸ್ಪಂದಿಸದ ಕಾರಣ ಸರಕಾರಿ ಶಾಲೆಗಳು ಮುಚ್ಚಲು ಕಾರಣವಾಗುತ್ತಿದೆ ಎಂದರು.ಕೋಡಪದವು SDMC ಅದ್ಯಕ್ಷರಾದ ಉಮ್ಮರ್ ಪಾರೂಕ್ ಟೆಕ್ನಿಕ್ ಸಬೆಗೆ ಶಿಕ್ಷಕರ,ಕಟ್ಟಡ,ಇನ್ನಿತರ ಕೊರತೆಯ ಬಗ್ಗೆ ಪ್ರತಿಭಟನಾ ಸಭೆಗೆ ಮಾಹಿತಿ ನೀಡಿದರು.ಇಲಾಖಾಧಿಕಾರಿ ಬರುವವರೆಗೂ ಸ್ಥಳದಿಂದ ಕದಲದ ಈ ಶಾಲೆಯ ಇಳಿವಯಸ್ಸಿನ ಹಳೆವಿದ್ಯಾರ್ಥಿಗಳೂ,ಮಾಜಿ ಗ್ರಾ.ಪಂಚಾಯತ್ ಅದ್ಯಕ್ಷರೂ ಆದ ಅಬ್ದುಲ್ಲಾ ಹಾಜಿ ಕುಕ್ಕಿಲ ಹಾಗೂ ಮಾಜಿ ಗ್ರಾ.ಪಂಚಾಯತ್ ಸದಸ್ಯರೂ,ಸಹಕಾರಿ ದುರೀಣರಾದ ಮಜಿ ರಾಮ್ ಭಟ್ ಪ್ರತಿಭಟನೆಯ ಕಾವು ಹೆಚ್ಚಲು ಮತ್ತು ಇಲಾಖೆಗೆ ಬಿಸಿ ಮುಟ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

 


ಪ್ರತಿಭಟನಾ ಸಭೆಗೆ BEO ಮಂಜುನಾಥನ್ ಎಮ್.ಜಿ.,ECO ಸುಜಾತಾ,ಸುದಾ,CRP ಬಿಂದು ಬಿ.ಜೆ ಆಗಮಿಸಿಸ ಸಂದರ್ಭದಲ್ಲಿ ಬಾರೀ ವಾಗ್ವದವೇ ನಡೆಯಿತು.ಪೋಲಿಸ್ ಸಿಬ್ಬಂದಿಯ ಮದ್ಯಸ್ಥಿಕೆಯ ನಂತರ ಪೋಷಕರ ಅವಹಾಲು ಸ್ವೀಕರಿಸಿ,ಸೋಮವಾರದಂದು ಎರಡು ಅತಿಥಿ ಶಿಕ್ಷಕರನ್ನು ಒದಗಿಸುತ್ತವೆ ಎಂದು ಭರವಸೆ ನೀಡಿದ ನಂತರ ಸೋಮವಾರದಿಂದ ಎಂದಿನಂತೆ ತರಗತಿ ಆರಂಭಿಸಲಾಗುವುದೆಂದು ತೀರ್ಮಾನಿಸಿ ಪ್ರತಿಭಟನೆ ಕೊನೆಗೊಳಿಸಲಾಯಿತು..

ಪ್ರತಿಭಟನಾ ಸಂಧರ್ಭದಲ್ಲಿ ವಿಟ್ಲಪಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯಂತ್ ಪೂರ್ಲಿಪ್ಪಾಡಿ,ಮಾಜಿ ಅಧ್ಯಕ್ಷರಾದ ರವೀಶ್ ಶೆಟ್ಟಿ ಕರ್ಕಳ,ರೇಷ್ಮಾ ಶಂಕರಿ ಬಲಿಪಗುಲಿ,ಉಪಾಧ್ಯಕ್ಷರಾ ಪ್ರೇಮ ಮದಕ,ಗ್ರಾ.ಪಂಚಾಯತ್ ಸದಸ್ಯರಾ ಹರ್ಷದ್ ಕುಕ್ಕಿಲ, ಹಳೆವಿದ್ಯಾರ್ಥಿ ಸಂಘದ ಹಸೈನಾರ್ ತಾಳಿತ್ತನೂಜಿ, ಪೋಷಕರು,ಹಳೆವಿದ್ಯಾರ್ಥಿಗಳು ಉಪಸ್ಥಿತರಿದ್ದರು..

Leave a Reply

Your email address will not be published. Required fields are marked *