Visitors have accessed this post 5 times.

ಸುಬ್ರಹ್ಮಣ್ಯ: ತಾಳಿಯನ್ನು ಮಾತ್ರ ಬಿಚ್ಚಿಟ್ಟು ಕರಿಮಣಿ ಜೊತೆ 12 ಲಕ್ಷ ರೂ. ಮತ್ತು ಅಂದಾಜು 28 ಪವನ್ ಚಿನ್ನ ಹೊತ್ತೊಯ್ದ ಕಳ್ಳರು..! 

Visitors have accessed this post 5 times.

ಸುಬ್ರಹ್ಮಣ್ಯ:  ಪಂಜ ಸಮೀಪದ  ಬಳ್ಪದಲ್ಲಿ ಬೀಗ ಹಾಕಲಾಗಿದ್ದ ಮನೆಯೊಂದರಿಂದ ಲಕ್ಷ ರೂಪಾಯಿ ಸಹಿತ ಚಿನ್ನ ಕಳವಾಗಿರುವ ಘಟನೆ ಬೆಳಕಿಗೆ ಬಂದಿದ್ದು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅ.20ರಂದು ಈ ಘಟನೆ ನಡೆದಿದ್ದು  ಬಳ್ಪ  ಗ್ರಾಮದ  ಅಕ್ಕೇಣಿ ಸುಂದರ ಗೌಡ ಎಂಬವರ ಮನೆಯಿಂದ ಸುಮಾರು ರೂ. 12 ಲಕ್ಷ ಮತ್ತು ಅಂದಾಜು 28 ಪವನ್ ಚಿನ್ನ ಕಳ್ಳತವಾಗಿದೆ. ಉಪ್ಪಿನಗಂಡಿ ಮತ್ತು ಕಡಬ , ಸುಬ್ರಮಣ್ಯ ಈ ಭಾಗದಲ್ಲಿ ಕಳ್ಳರ ಕಾಟ ದಿನೆ ದಿನೆ ಹೆಚ್ಚುತ್ತಿವೆ.

ಮನೆ ಮಂದಿ ಜೊತೆ ಅ. 17ರಂದು  ಮನೆಗೆ ಬೀಗ ಹಾಕಿ  ಮಗಳ ಮನೆ ದುರಸ್ತಿಯ ಹಿನ್ನೆಲೆಯಲ್ಲಿ ತೆರಳಿದ್ದರು. ಅಲ್ಲಿ ಕೆಲಸ ಮುಗಿಸಿ ಮತ್ತೆ ಮನೆಗೆ ಬಂದ ವೇಳೆ   ಮನೆಯ ಎದುರು ಬಾಗಿಲಿನ ಬೀಗ ಮುರಿದಿರುವುದು ಗಮನಕ್ಕೆ ಬಂದಿದೆ. ಮನೆಯೊಳಗೆ  ನೋಡಿದಾಗ ರೂ. 12 ಲಕ್ಷ ಮತ್ತು 28 ಪವನ್ ಚಿನ್ನ ಕಾಣೆಯಾಗಿರುವುದು ತಿಳಿದಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಅಲ್ಲದೆ  ಕರಿಮಣಿ ಸರವೊಂದರ ತಾಳಿಯನ್ನು ಬಿಚ್ಚಿಟ್ಟಿರುವುದಾಗಿ ತಿಳಿದುಬಂದಿದೆ.   ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೋಲೀಸರರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *