Visitors have accessed this post 322 times.

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ವಿಸ್ತರಣಾ ಕಾಮಗಾರಿಯ ಇಂಜಿನಿಯರ್ ಅನುಮಾನಸ್ಪದ ಸಾವು..!

Visitors have accessed this post 322 times.

ಉಪ್ಪಿನಂಗಡಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣಾ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿರುವ ಕೆಎನ್‌ಆ‌ರ್ ಸಂಸ್ಥೆಯಲ್ಲಿ ಸೈಟ್ ಇಂಜಿನಿಯರ್ ಆಗಿ – ಕಾರ್ಯನಿರ್ವಹಿಸುತ್ತಿದ್ದ ತಮಿಳು ನಾಡು ಮೂಲದ ಅನೂಪ್ (47) ಸಂಶಯಾಸ್ಪ ದವಾಗಿ ಮೃತಪಟ್ಟ ಘಟನೆ ಪೆರ್ನೆ ಎಂಬಲ್ಲಿ ನಡೆದಿದೆ ಮಂಗಳವಾರ ಅನೂಪ್‌ ವಾಹನ ಚಾಲಕ ಪೋನ್ ಮಾಡಿದಾಗ ಕರೆಯನ್ನು ಸ್ವೀಕರಿಸದೇ ಇದ್ದಾಗ ಅನುಮಾನದಿಂದ ಅವರ ವಾಸ್ತವ್ಯದ ಮನೆಗೆ ಭೇಟಿ ನೀಡಿದ್ದು, ಆಗ ಅಲ್ಲಿ ಒಳಗಿನಿಂದ ಚಿಲಕ ಹಾಕಿಕೊಂಡಿತ್ತು. ಕಿಟಕಿಯಿಂದ ಅವರ ಬೆಡ್ ರೂಮ್ ನ್ನು ನೋಡಿದಾಗ ಬಾಯಿ ಮತ್ತು ಮೂಗಿನಿಂದ ರಕ್ತಸ್ರಾವವಾದ ರೀತಿಯಲ್ಲಿ ನೆಲದಲ್ಲಿ ಬಿದ್ದುಕೊಂಡು ಸಾವನ್ನಪ್ಪಿದ ಸ್ಥಿತಿಯಲ್ಲಿ ಅವರ ಮೃತದೇಹ ಕಂಡು ಬಂದಿದೆಯೆನ್ನಲಾಗಿದೆ. ಸಂಸ್ಥೆಯ ಚಾಲಕ ರಮೇಶ್‌ ಎಂಬವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *