Visitors have accessed this post 729 times.
ಕನ್ಯಾನ: ಕನ್ಯಾನ ಗ್ರಾಮ ಪಂಚಾಯತ್ ಬಹುಬೇಡಿಕೆಯ ಘನತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ಯೋಜನೆಯು ಕನ್ಯಾನ ಗ್ರಾಮದಲ್ಲಿ ಅನುಷ್ಟಾನಗೊಂಡಿದ್ದು,ಸದ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಾಸವಾಗಿರುವ ಕುಟುಂಬಗಳ ಮನೆಯಿಂದ ಹಾಗೂ ವಾಣಿಜ್ಯ ಕಟ್ಟಡಗಳಿಂದ ಒಣ ಕಸವನ್ನು ವಿಲೇವಾರಿ ಯೋಜನೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ರೇಖಾ ರಮೇಶ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷರಾದ ಅಬ್ದುಲ್ ರಹಿಮಾನ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಸಂತಿ, ಸ್ಪೂರ್ತಿ ಸಂಜೀವಿನಿ ಸಂಘದ ಎಂ.ಬಿ .ಕೆ ಮಮತಾ, ಎಲ್.ಸಿ. ಆರ್.ಪಿ.ಶ್ರೀಮತಿ ಹೇಮಲತಾ,ಸಂಜೀವಿನಿ ಘಟಕ ಸದಸ್ಯ ಶ್ರೀ ಮತಿ ಶಾರದಾ,ಘಟಕದ ಚಾಲಕರು ಶ್ರೀಮತಿ ದುರ್ಗಲಕ್ಷ್ಮೀ, ಸಹಾಯಕಿ ಶ್ರೀಮತಿ ಮೋಹಿನಿ ಚೆನ್ನಯಮೂಲೆ ಮತ್ತಿತರರು ಉಪಸ್ಥಿತರಿದ್ದರು.