Visitors have accessed this post 799 times.
ಮಂಗಳೂರಿನ ಸೋಮೇಶ್ವರದ ಸಮುದ್ರ ತೀರದಲ್ಲಿ ಆಟವಾಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಅಲೆಗಳ ರಭಸಕ್ಕೆ ಸಿಲುಕಿ ಕಡಲುಪಾಲಾಗಿದ್ದಾರೆ.
ಮೃತ ಮಕ್ಕಳನ್ನು ಸೋಮೇಶ್ವರ ಪರಿಜ್ಞಾನ ದ್ವಿತೀಯ ಪಿಯು ಕಾಲೇಜಿನ ಯಶ್ವಿತ್(18) ಹಾಗೂ ಯುವರಾಜ್(18) ಎಂದು ಗುರುತಿಸಲಾಗಿದೆ. ಯೆಶ್ಚಿತ್, ಮಂಜೇಶ್ವರದ ಕುಂಜತ್ತೂರು ಅಡ್ಕ ನಿವಾಸಿ ಶೇಖರ ಎಂಬವರ ಪುತ್ರ ಹಾಗೂ ಯುವರಾಜ್, ಕುಂಜತ್ತೂರು ಮಜಲ್ ನಿವಾಸಿ ಜಯೇಂದ್ರ ಎಂಬವರ ಪುತ್ರ. ಸಮುದ್ರದಲ್ಲಿ ಕಾಣೆಯಾದ ಇವರಿಬ್ಬರಿಗಾಗಿ ಸ್ಥಳೀಯ ಮುಳುಗುತಜ್ಞರು ಇದೀಗ ಹುಡಕಾಟ
ನಡೆಸುತ್ತಿದ್ದಾರೆ.