January 8, 2026
WhatsApp Image 2023-09-13 at 8.58.00 AM

ಬೆಂಗಳೂರು: ಉದ್ಯಮಿ ಗೋವಿಂದಬಾಬು ಪೂಜಾರಿಗೆ ಬೈಂದೂರು ಟಿಕೆಟ್ ಕೊಡಿಸೋದಾಗಿ 5 ಕೋಟಿ ವಂಚಿಸಿರೋ ಪ್ರಕರಣ ಸಂಬಂಧ ಈಗ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಚೈತ್ರಾ ಕುಂದಾಪುರ ಇಡಿ, ಐಟಿಗೆ ಬರೆದಂತ ಪತ್ರ ಬಹಿರಂಗವಾಗಿದೆ.

ಉದ್ಯಮಿ ಗೋವಿಂದಬಾಬುಗೆ ಬೆದರಿಕೆ ಹಾಕೋ ಸಂಬಂಧ ಚೈತ್ರಾ ಕುಂದಾಪುರ ಮತ್ತೊಂದು ಪ್ಲಾನ್ ಮಾಡಿರೋದು ಬಹಿರಂಗವಾಗಿದೆ.

ಗೋವಿಂದಬಾಬು ಬೈಂದೂರು ಎಂಎಲ್‌ಎ ಟಿಕೆಟ್ ಗಾಗಿ 5 ಕೋಟಿ ನೀಡಿರೋ ದೂರಿನ ಸಂಬಂಧ ಇಡಿ, ಐಟಿ ಅಧಿಕಾರಿಗಳಿಗೆ ಚೈತ್ರಾ ಕುಂದಾಪುರ ದೂರು ನೀಡಿದ್ದಾರೆ. ಅದರಲ್ಲಿ ಗೋವಿಂದಬಾಬು ಪೂಜಾರಿ ವಿರುದ್ಧವೇ 5 ಕೋಟಿ ಹಣ ಅವರು ನೀಡಿದ್ದು ಹೇಗೆ.? ಅವರಿಗೆ ಎಲ್ಲಿಂದ ಬಂತು ಹಣ ಎನ್ನುವ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.

ಈ ದೂರಿನ ಸಂಬಂಧ ಆಕೆ ಗೋವಿಂದಬಾಬು ಪೂಜಾರಿ ಹಾಗೂ ಚೈತ್ರಾ ಕುಂದಾಪುರ ನಡುವೆ ನಡೆದಂತ ಸಂಭಾಷಣೆ ಆಡಿಯೋ, ಪೊಲೀಸರಿಗೆ ನೀಡಿರುವಂತ ದೂರಿನ ಪ್ರತಿ ಸೇರಿದಂತೆ ಹಲವು ದಾಖಲೆಗಳನ್ನು ಒದಗಿಸಿದ್ದಾರೆ ಎನ್ನಲಾಗಿದೆ.

About The Author

Leave a Reply