Visitors have accessed this post 723 times.
ಬೆಂಗಳೂರು: ಹಿಜಾಬ್ ವಾಪಸ್ಸು ಪಡೆದುಕೊಂಡಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಸ್ವಾಗತ ಮಾಡುವೆ ಅಂತ ಹಿಜಾಬ್ ಪರ ಹೋರಾಟಗಾರ್ತಿ ಮುಸ್ಕಾನ್ ಹೇಳಿದ್ದಾರೆ.
ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ಬಗ್ಗೆ ತಿಳಿಸಿದ್ದು, ಇದೇ ವೇಳೆ ಅವರು ನಾನು ಕಾಲೇಜು ಬಿಟ್ಟಿದ್ದು, ಈಗ ಮತ್ತೆ ಕಾಲೇಜಿಗೆ ಹೋಗುವೆ, ಸಿಎಂ ಸಿದ್ದರಾಮಯ್ಯ ಅವರ ನಿರ್ಧಾರಕ್ಕೆ ಅವರಿಗೆ ಧನ್ಯವಾದ ಹೇಳುವೆ ಅಂತ ಹೇಳಿದರು.
ಇನ್ನೂ ನನ್ನ ಹಾಗೇ ಹಲವು ಮಂದಿ ಶಾಲಾ ಕಾಲೇಜನ್ನು ಬಿಟ್ಟಿದ್ದು ಅವರಿಗೆಲ್ಲ ನಾನು ಮತ್ತೆ ವಾಪಸ್ಸು ವಿದ್ಯಾಬ್ಯಾಸವನ್ನು ಮುಂದುವರೆಸಲು ಕರೆ ನೀಡುವೆ ಅಂತ ಇದೇ ವೇಳೆ ಮುಸ್ಕಾನ್ ಹೇಳಿದ್ದಾರೆ.