Visitors have accessed this post 714 times.
ಕಲಬುರಗಿ: ರಾಜ್ಯದಲ್ಲಿ ನಾಯಿ,ಕತ್ತೆ ಮಾಂಸವನ್ನ ದೊಡ್ಡ ದೊಡ್ಡ ಹೋಟೆಲ್ನಲ್ಲಿ ಮಾರಾಟ ಮಾಡಲಾಗ್ತಿದೆ ಯಾರು ಮುಸಲ್ಮಾನರ ಹೋಟೆಲ್ನಲ್ಲಿ ಮಾಂಸ ತಿನ್ನಲು ಹೋಗಬೇಡಿ. ಹಿಂದೂ ಮಿಲಿಟರಿ ಹೋಟೆಲ್ನಲ್ಲಿ ಮಾಂಸ ತಿನ್ನಿ ಅಂತ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಅವರು ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತ ಈ ಬಗ್ಗೆ ತಿಳಿಸಿದರು. ಇದೇ ವೇಳೆ ಅವರು ಮಾತನಾಡುತ್ತರ, ರಾಜ್ಯದಲ್ಲಿ ಗಂಭೀರವಾದ ವಿಚಾರ. ರಾಜ್ಯದಲ್ಲಿ ನಾಯಿ,ಕತ್ತೆ ಮಾಂಸವನ್ನ ದೊಡ್ಡ ದೊಡ್ಡ ಹೋಟೆಲ್ನಲ್ಲಿ ಮಾರಾಟ ಮಾಡಲಾಗ್ತಿದೆ. ರಾಜ್ಯದಲ್ಲಿನ ಎಲ್ಲಾ ಕಸಾಯಿ ಕಾರ್ಖಾನೆಗಳನ್ನ ತಪಾಸಣೆ ಮಾಡಲಾಗುತ್ತಿದೆ. ದೂರು ನೀಡಿದ ಪುನಿತ್ ಕೆರಹಳ್ಳಿಯನ್ನ ಬಂಧಿಸಲಾಗಿದೆ. ಕಳ್ಳನನ್ನ ಹಿಡಿದುಕೊಟ್ಟವನನ್ನೆ ಬಂಧಿಸಿದ್ದಾರೆ. 15 ವರ್ಷದಿಂದ ಮಾಂಸದಂಧೆ ನಡೆಯುತ್ತಿದೆಯೆಂದು ಅಬ್ದುಲ್ ರಜಾಕ್ ಹೇಳಿದ್ದಾನೆ. 15 ವರ್ಷದಿಂದ ರಾಜ್ಯದ ಪೊಲೀಸರು,ರೈಲ್ವೆ ಪೊಲೀಸರು ಏನ್ ಕತ್ತೆ ಕಾಯ್ತಿದ್ದರಾ?, ನಾಯಿ ಮಾಂಸ ವಿರುದ್ಧ ಮುಸಲ್ಮಾನರ ವ್ಯಾಪಾರ ಸಂಘದವರೇ ದೂರು ನೀಡಿದ್ದಾರೆ. ಯಾರು ಮುಸಲ್ಮಾನರ ಹೋಟೆಲ್ನಲ್ಲಿ ಮಾಂಸ ತಿನ್ನಲು ಹೋಗಬೇಡಿ. ಹಿಂದೂ ಮಿಲಿಟರಿ ಹೋಟೆಲ್ನಲ್ಲಿ ಮಾಂಸ ತಿನ್ನಿ ಎಂದರು.