
ದೆಹಲಿಯಲ್ಲಿರುವ ಕ್ಷೌರದ ಅಂಗಡಿಗೆ ಭೇಟಿ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕ್ಷೌರಿಕನ ಬಳಿ ಹೋಗಿ ಶೇವ್ ಮಾಡಿಸಿಕೊಂಡು ಸಂಕಷ್ಟ ಆಲಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.



ಘಟನೆಯ ವಿಡಿಯೋ ಹಂಚಿಕೊಂಡಿರುವ ರಾಹುಲ್ ಗಾಂಧಿ, ಕ್ಷೌರಿಕ, ನನ್ನ ಪತ್ನಿಗೆ ಹೃದಯ ಸಂಬಂಧಿ ಖಾಯಿಲೆ ಇದೆ.
ನಾನು ದುಡಿದ ಹಣ ಔಷಧಿ ಖರ್ಚಿಗೆ ಸಾಕಾಗಲ್ಲ. ಇರಲು ಮನೆಯಿಲ್ಲ, ಬಾಡಿಗೆ ಮನೆಯಲ್ಲಿದ್ದೇನೆ ಎಂದು ಆತ ಹೇಳಿಕೊಂಡಿದ್ದಾನೆ.ಕಾಂಗ್ರೆಸ್ ಸರ್ಕಾರ ಇದ್ದಾಗ ಬಹಳ ಚೆನ್ನಾಗಿ ಇದ್ದೆವು, ಈಗ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ. ಯಾವುದೇ ಸಹಾಯಧನ ಸಿಗುತ್ತಿಲ್ಲ ಎಂದು ರಾಹುಲ್ ಗಾಂಧಿ ಬಳಿ ಹೇಳಿಕೊಂಡಿದ್ದಾರೆ .
ಕ್ಷೌರಿಕ ಅಜಿತ್ ಭಾಯ್ ಅವರ ಈ ನಾಲ್ಕು ಮಾತುಗಳು ಮತ್ತು ಅವರ ಕಣ್ಣೀರು ಇಂದು ಪ್ರತಿಯೊಬ್ಬ ದುಡಿಯುವ ಬಡ ಮತ್ತು ಮಧ್ಯಮ ವರ್ಗದ ಭಾರತದ ಕಥೆಯನ್ನು ಹೇಳುತ್ತಿದೆ.ಕ್ಷೌರಿಕರಿಂದ ಹಿಡಿದು ಚಮ್ಮಾರರವರೆಗೆ, ಕುಂಬಾರರಿಂದ ಬಡಗಿಗಳವರೆಗೆ – ಕುಸಿಯುತ್ತಿರುವ ಆದಾಯ ಮತ್ತು ಹೆಚ್ಚುತ್ತಿರುವ ಹಣದುಬ್ಬರವು ಅವರ ಅಂಗಡಿಗಳು, ಅವರ ಮನೆಗಳು ಮತ್ತು ಆತ್ಮಗೌರವವನ್ನು ದೈಹಿಕ ಕಾರ್ಮಿಕರಿಂದ ಕಸಿದುಕೊಂಡಿದೆ.
ಇಂದು ಬೇಕಾಗಿರುವುದು ಆದಾಯವನ್ನು ಹೆಚ್ಚಿಸುವ ಮತ್ತು ಕುಟುಂಬಗಳಿಗೆ ಉಳಿತಾಯವನ್ನು ಮರಳಿ ತರುವ ಆಧುನಿಕ ಕ್ರಮಗಳು ಮತ್ತು ಹೊಸ ಯೋಜನೆಗಳು. ಮತ್ತು, ಕೌಶಲ್ಯವನ್ನು ಸರಿಯಾಗಿ ಸಶಕ್ತಗೊಳಿಸುವ ಮತ್ತು ಕಠಿಣ ಪರಿಶ್ರಮದ ಪ್ರತಿಯೊಂದು ಹೆಜ್ಜೆಯೂ ನಿಮ್ಮನ್ನು ಪ್ರಗತಿಯ ಏಣಿಗೆ ಕರೆದೊಯ್ಯುವ ಸಮಾಜ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.