

ಚಿಕ್ಕಮಗಳೂರು: ಕಡೂರು ತಾಲೂಕಿನ ಬೀರೂರು ಪಟ್ಟಣ ಠಾಣಾ ವ್ಯಾಪ್ತಿಯಲ್ಲಿರುವ ಕರ್ನಾಟಕ ವಿದ್ಯುತ್ ನಿಗಮದ ಉಗ್ರಾಣದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸುಮಾರು 35 ವರ್ಷ ಪ್ರಾಯದ ಪುನೀತ್ ಕುಮಾರ್ ಎಂಬುವವರು ದಿನಾಂಕ 4.5.26.ರಂದು ಬೆಳಗ್ಗೆ 8:30 ಸಮಯದಲ್ಲಿ ಕಚೇರಿಯ ಒಳಾಂಗಣದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಮೃತರು ಅಜ್ಜಂಪುರದ ನಿವಾಸಿಯಾಗಿದ್ದು, ತಾಯಿ ಹಾಗೂ ಪತ್ನಿಯವರನ್ನು ಅಗಲಿದ್ದಾರೆ. ಹೆಚ್ಚಿನ ತನಿಖೆಯನ್ನು ಬೀರೂರಿನ ಠಾಣಾಧಿಕಾರಿಗಳು ನಡೆಸುತ್ತಿದ್ದಾರೆ.







