Visitors have accessed this post 1010 times.

ಪುತ್ತೂರು: ಬೈಕ್ – ಬಸ್‌ ನಡುವೆ ಭೀಕರ ಅಪಘಾತ; ಕುಂಡಡ್ಕದ ಯುವಕ ಸ್ಥಳದಲ್ಲೇ ಮೃತ್ಯು..!

Visitors have accessed this post 1010 times.

ಪುತ್ತೂರು : ಬೈಕ್ ಮತ್ತು ಕೆಎಸ್‌ಆರ್‌ಟಿಸಿ ಬಸ್‌ ನಡುವೆ ಭೀಕರ ಅಫಘಾತ ಸಂಭವಿಸಿ ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಪುತ್ತೂರು ಪುರುಷರ ಕಟ್ಟೆ ಬಳಿ ನಡೆದಿದೆ. ಮೃತಪಟ್ಟ ಬೈಕ್‌ ಸವಾರನನ್ನು ವಿಟ್ಲ ಮೂಲದ ಕುಂಡಡ್ಕ ನಿವಾಸಿ ಮೋಕ್ಷಿತ್‌ ಎಂದು ಗುರುತಿಸಲಾಗಿದೆ. ಕುಂಡಡ್ಕ ಬಾಳಮೂಳೆ ಆನಂದ ಗೌಡ ಎಂಬವರ ಪುತ್ರ ಮೋಕ್ಷಿತ್‌ ನರಿಮೊಗರು ಬಿಂದು ಫ್ಯಾಕ್ಟರಿಯಲ್ಲಿ ಸಿಪೋನ್‌ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಪುತ್ತೂರು ಕಡೆಯಿಂದ ಪುರುಷರಕಟ್ಟೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.

Leave a Reply

Your email address will not be published. Required fields are marked *