Visitors have accessed this post 716 times.
ದೇಶಾದ್ಯಂತ ಭಯೋತ್ಪಾದಕ ದಾಳಿ ನಡೆಸಲು ಜಾಗತಿಕ ಭಯೋತ್ಪಾದಕ ಗುಂಪು ಐಸಿಸ್ ಪಿತೂರಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಕರ್ನಾಟಕ ಮತ್ತು ಮಹಾರಾಷ್ಟ್ರದ 40 ಸ್ಥಳಗಳ ಮೇಲೆ ದಾಳಿ ನಡೆಸುತ್ತಿದೆ ಎಂದು ಖಾಸಗಿ ಮಾಧ್ಯಮಗಳು ವರದಿ ಮಾಡಿದೆ.
ಇಂದು ಬೆಳಿಗ್ಗೆಯಿಂದ ಎನ್ಐಎ ದಾಳಿ ನಡೆಸುತ್ತಿರುವ ಒಟ್ಟು 44 ಸ್ಥಳಗಳಲ್ಲಿ, ಏಜೆನ್ಸಿ ಅಧಿಕಾರಿಗಳು ಕರ್ನಾಟಕದ 1, ಪುಣೆಯ 2, ಥಾಣೆ ಗ್ರಾಮೀಣದ 31, ಥಾಣೆ ನಗರದ 9 ಮತ್ತು ಭಯಂದರ್ನ 1 ಸ್ಥಳವನ್ನು ಶೋಧಿಸಿದ್ದಾರೆ ಎನ್ನಲಾಗಿದೆ.
ಕರ್ನಾಟಕದಲ್ಲಿ ಒಂದು, ಪುಣೆಯಲ್ಲಿ 2, ಥಾಣೆ ಗ್ರಾಮೀಣದಲ್ಲಿ 31, ಥಾಣೆ ನಗರದಲ್ಲಿ 9 ಮತ್ತು ಭಯಂದರ್ನಲ್ಲಿ ಒಂದು ಸ್ಥಳವನ್ನು ಎನ್ಐಎ ಅಧಿಕಾರಿಗಳು ಶೋಧಿಸಿದ್ದಾರೆ ಅಂತ ತಿಳಿದು ಬಂದಿದೆ.