Visitors have accessed this post 233 times.

ಸಾಲ ವಾಪಾಸು ಕೇಳಿದ್ದಕ್ಕೆ ತಂದೆ, ಮಗನಿಗೆ ಹಲ್ಲೆ

Visitors have accessed this post 233 times.

ಬ್ರಹ್ಮಾವರ: ಸಾಲ ವಾಪಾಸು ಕೇಳಿದಕ್ಕೆ ತಂದೆ ಹಾಗೂ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ಬಾರಕೂರು ನಾಯರ್ ಪೆಟ್ರೋಲ್ ಬಂಕ್ ಎದುರು ಸಂಭವಿಸಿದೆ. ಹಲ್ಲೆಗೊಳಗಾದವರನ್ನು ಬಾರಕೂರಿನ ಮುಹಮ್ಮದ್ ಮುಫೀಝ್(19) ಹಾಗೂ ಅವರ ತಂದೆ ಫಕೀರ್ ಸಾಹೇಬ್ ಎಂದು ಗುರುತಿಸಲಾಗಿದೆ. ಮುಫೀಝ್ ತನ್ನ ತಂದೆ ಜೊತೆ ಇದ್ದಾಗ ಪರಿಚಯದ ಪ್ರಮೋದ್‌ನನ್ನು ನೋಡಿ ಸಾಲದ ಹಣ 300ರೂ. ವಾಪಾಸು ಕೇಳಿದ್ದಾರೆ. ಅದಕ್ಕೆ ಅವಾಚ್ಯವಾಗಿ ಬೈದು ಮುಫೀಝ್ ಗೆ ಹಲ್ಲೆ ನಡೆಸಿದ್ದು, ತಡೆಯಲು ಬಂದ ಅವರ ತಂದೆಗೆ ಅಲ್ಲೇ ಇದ್ದ ರಿಕ್ಷಾ ಚಾಲಕ ಹಲ್ಲೆ ನಡೆಸಿದ್ದಾನೆ. ಬಳಿಕ ಅವರಿಬ್ಬರು ರಿಕ್ಷಾದಲ್ಲಿ ಅಲ್ಲಿಂದ ಪರಾರಿಯಾದರೆಂದು ದೂರಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *