Visitors have accessed this post 244 times.
ನಿರ್ಮಾಣ ಹಂತದ ಮನೆಯಲ್ಲಿನ ನೀರಿನ ಸಂಪ್ ಗೆ ಬಿದ್ದು ಏಳು ವರ್ಷದ ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೆಂಗಳೂರಿನ ಗಂಗಮ್ಮನಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಯಾದಿಗಿರಿ ಮೂಲದ ಶಂಶುದ್ದೀನ್ ದಂಪತಿ ಕಟ್ಟಡ ಕಾರ್ಮಿಕರಾಗಿದ್ದು, ಅಬ್ಬಿಗೆರೆ ಶಿವಣ್ಣ ತೋಟದ ವ್ಯಾಪ್ತಿಯಲ್ಲಿ ಶೆಡ್ ನಿರ್ಮಿಸಿಕೊಂಡು ವಾಸಿಸುತ್ತಿದ್ದರು.
ಶೆಡ್ ಮುಂಭಾಗ ಆಟವಾಡುತ್ತಿದ್ದ ಮಗು ನೀರಿನ ಸಂಪ್ ಗೆ ಬಿದ್ದು ಮೃತಪಟ್ಟಿದೆ.
ಶಬ್ಬೀರ್ (7) ಮೃತ ದುರ್ದೈವಿ. ಶಂಶುದೀನ್ ನೀಡಿದ ದೂರು ಆಧರಿಸಿ ಅಸಹಜ ಸಾವು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.