ಮಂಗಳೂರು: ಜೂನ್ 17ರಂದು ಕರಾವಳಿಯಲ್ಲಿ ಬಕ್ರೀದ್

ಮಂಗಳೂರು: ಶುಕ್ರವಾರ ಅಸ್ತಮಿಸಿದ ಶನಿವಾರ ರಾತ್ರಿ ದುಲ್‌ಹಜ್ ತಿಂಗಳ ಪ್ರಥಮ ಚಂದ್ರದರ್ಶನವಾಗಿರುವ ಹಿನ್ನೆಲೆಯಲ್ಲಿ ಜೂನ್ 17ರಂದು ಕರಾವಳಿಯಲ್ಲಿ ಬಕ್ರೀದ್ (ಈದುಲ್ ಅಝ್‌ಹಾ) ಆಚರಿಸಲು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಸೂಚಿಸಿದ್ದಾರೆ. ಜೂನ್ 8ರ ಶನಿವಾರ ದುಲ್ಹಜ್ಜ್ ಒಂದು ಆಗಿರುತ್ತದೆ. ಜೂ.16ರಂದು ಅರಫಾ ದಿನವಾಗಿರುತ್ತದೆ ಎಂದು ಖಾಝಿ ತಿಳಿಸಿರುವುದಾಗಿ ಮಸ್ಜಿದ್ ಝೀನತ್ ಬಕ್ಷ್ ಹಾಗೂ ಈದ್ಗಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ಹನೀಫ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Reply