Visitors have accessed this post 471 times.

ಬಕ್ರೀದ್‌ನಲ್ಲಿ ಕುರಿಯನ್ನೇಕೆ ಬಲಿ ಕೊಡುತ್ತಾರೆ.? ಕೋಳಿ ಬಳಕೆ ಇಲ್ಲವೇಕೆ..?

Visitors have accessed this post 471 times.

ವಿಶ್ವದೆಲ್ಲೆಡೆ ಮುಸ್ಲಿಮರು ಇಂದು ಪವಿತ್ರ ಹಬ್ಬ ಬಕ್ರೀದ್ ನ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಬಕ್ರೀದ್ ಆಚರಿಸುತ್ತಿರುವ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಶುಭಾಶಯಗಳು ಅಲ್ಲಾಹುನ ಆಜ್ಞೆಯಂತೆಪ್ರವಾದಿ ಅಬ್ರಾಹಂ ಅವರು ತನ್ನ ಮಗನನ್ನೇ ಬಲಿ ನೀಡಿದ ದಿನವಾಗಿದೆ. ಈ ದಿನ ಬಲಿದಾನದ ದಿನವಾಗಿ ಮುಸ್ಲಿ ಸಮುದಾಯ ಆಚರಿಸುತ್ತಾರೆ.

ಈ ಹಬ್ಬಕ್ಕೆ ಈದ್ ಉಲ್ ಅಧಾ ಎಂಬ ಹೆಸರೂ ಇದೆ. ಮುಸ್ಲಿಮರಿಗೆ ಒಟ್ಟು ಐದು ಕಡ್ಡಾಯವಾಗಿ ಅನುಸರಿಸಬೇಕಾದ ಕಾರ್ಯಗಳಿವೆ. ಇಂದು ನಿಮಗೆ ಅಮೂಲ್ಯ ಎನಿಸಿದ್ದನ್ನು ತ್ಯಾಗ ಮಾಡುವಂತಿರಬೇಕು ಎಂಬುದೇ ಇದರ ಮುಖ್ಯ ಸಾರ. ಈ ಹಬ್ಬದ ಮುಖ್ಯವಾದ ಅಂಶವೆಂದರೆ ಸುಮಾರು ಸಾವಿರದ ನಾನೂರು ವರ್ಷಗಳ ಹಿಂದೆ ಪ್ರವಾದಿ ಇಬ್ರಾಹೀಮರು ತಮಗೆ ಅತ್ಯಂತ ಪ್ರೀತಿ ಪಾತ್ರರಾದ ಮಗ, ಇಸ್ಮಾಯೀಲ್ ರನ್ನೂ ದೇವರಿಗಾಗಿ ತ್ಯಾಗ ಮಾಡಲು ಸಿದ್ಧರಿದ್ದರು ಎಂಬುದೇ ಆಗಿದೆ.

ಹೀಗಾಗಿ ಈ ಹಬ್ಬದಂದು ಮುಸ್ಲಿಂ ಸಮುದಾಯದ ಮಂದಿ ತಮ್ಮ ಕೈಲಾದಷ್ಟು ದಾನ ಮಾಡುವುದು ಬಡವರಿಗೆ ಹಂಚುವ ಕಾರ್ಯವನ್ನೂ ಸಹ ಮಾಡುತ್ತಾರೆ. ಆದ್ರೆ ಈ ದಿನ ಪ್ರಾಣಿ ಬಲಿ ಕೊಡುವ ಕುರಿತಂತೆ ಈಗಲೂ ಪರ ವಿರೋಧ ಚರ್ಚೆಗಳು ನಡೆಯುತ್ತಲೇ ಇರುತ್ತದೆ. ಹಾಗಾದ್ರೆ ಬಕ್ರೀದ್‌ನಲ್ಲಿ ಕುರಿಗಳ ಬಲಿ ಕೊಡುವುದೇಕೆ..? ಪ್ರವಾದಿ ಮೊಹಮ್ಮದ್‌ಗಿಂತ ಸುಮಾರು 2500 ವರ್ಷಗಳ ಹಿಂದೆ ಬದುಕಿದ್ದ ಮೊದಲ ಪ್ರವಾದಿ ಆದಮ್‌ನ ಕಾಲದಲ್ಲಿ ಮೊದಲ ತ್ಯಾಗ ನಡೆಯಿತು. ಪ್ರವಾದಿ ಆದಮ್‌ರಿಗೆ ಇಬ್ಬರು ಗಂಡು ಮಕ್ಕಳಿದ್ದರು, ಖಾಬಿಲ್ ಮತ್ತು ಹ್ಯಾಬಿಲ್ (ಬೈಬಲ್ ಕೇನ್ ಮತ್ತು ಅಬೆಲ್) ಇಬ್ಬರೂ ಒಂದೇ ಮಹಿಳೆಯನ್ನು ಮದುವೆಯಾಗಲು ಬಯಸಿದ್ದರು. ಅಲ್ಲಾ ಆ ಮಹಿಳೆಯನ್ನು ಮದುವೆಯಾಗಲು ತನ್ನ ಪುತ್ರರು ತ್ಯಾಗವನ್ನು ಅರ್ಪಿಸಬೇಕು ಎಂದು ಪ್ರವಾದಿ ಆದಮ್‌ಗೆ ಹೇಳಿದ್ದರಂತೆ.

ಆದರೆ ಈ ಘಟನೆ ದುರಂತ ತಿರುವು ಪಡೆಯುತ್ತದೆ. ಹಬಿಲ್, ಪಶುಪಾಲಕ ತನ್ನ ತ್ಯಾಗದ ಅರ್ಪಣೆಯಾಗಿ ಪ್ರಧಾನ ರಾಮ್ ಅನ್ನು ಪ್ರಸ್ತುತಪಡಿಸುತ್ತಾನೆ. ಇದಕ್ಕೆ ವ್ಯತಿರಿಕ್ತವಾಗಿ, ಖಾಬಿಲ್ ಎಂಬ ಕೃಷಿಕನು ತನ್ನ ಹೊಲಗಳಿಂದ ಉತ್ಪನ್ನಗಳನ್ನು ನೀಡುತ್ತಾನೆ. ಖಾಬಿಲ್‌ನ ನೀಡಿದ ವಸ್ತು ತಿರಸ್ಕಾರವಾಯಿತು, ಇದರಿಂದ ಕೋಪಗೊಂಡ ಆತ ತನ್ನ ಸಹೋದರನ ಹತ್ಯೆಗೆ ಮುಂದಾಗುತ್ತಾನೆ. ಈದ್ ಅಲ್-ಅಧಾ ಆಚರಣೆಗಳು ರಜೆಯ ಮೊದಲ ದಿನ ಅಥವಾ ನಂತರದ ಎರಡು ದಿನಗಳಲ್ಲಿ ಪ್ರಾಣಿಯನ್ನು, ಸಾಮಾನ್ಯವಾಗಿ ಮೇಕೆಯನ್ನು ಬಲಿ ನೀಡುವುದನ್ನು ಒಳಗೊಂಡಿರುತ್ತದೆ.

ಕೋಳಿಯನ್ನೇಕೆ ಅವರು ಬಲಿ ಕೊಡುವುದಿಲ್ಲ?

ಬಕ್ರೀದ್ ದಿನದಲ್ಲಿ ಮೇಕೆ, ಕುರಿಗಳ ಬಲಿ ಕೊಡಲಾಗುತ್ತದೆ. ಆದರೆ ಕೋಳಿಗಳನ್ನು ಏಕೆ ಬಲಿ ಕೊಡುವುದಿಲ್ಲ ಎಂಬ ಪ್ರಶ್ನೆ ಸಾಮಾನ್ಯವಾಗಿ ಎಲ್ಲರಲ್ಲೂ ಮೂಡಲಿದೆ. ಬಕ್ರೀದ್‌ನಲ್ಲಿ ಕೋಳಿ ಅಥವಾ ಆಸ್ಟ್ರಿಚ್ ನಂತಹ ಪಕ್ಷಿಗಳನ್ನು ಬಲಿ ನೀಡುವುದು ತಪ್ಪು ಎಂಬುದಾಗಿ ನಂಬಲಾಗಿದೆ. ಇದೊಂದು ಕಟ್ಟುಪಾಡು ಆಗಿರುವ ಕಾರಣದಿಂದ ಪ್ರತಿಯೊಂದು ಮುಸ್ಲಿಮರ ಮನೆಯಲ್ಲಿ ಬಲಿ ನೀಡಲಾಗುತ್ತದೆ. ಬಕ್ರೀದ್ ಸಮಯದಲ್ಲಿ ಕೋಳಿಮಾಂಸಕ್ಕೆ ಹೆಚ್ಚು ಮಹತ್ವ ನೀಡಲ್ಲ. ಯಾಕೆಂದರೆ ಬಕ್ರೀದ್ ವೇಳೆ ಕೋಳಿ ಮಾಂಸ ಸೇವಿಸುವುದು ಪಾಪವೆಂದು ಭಾವಿಸಲಾಗುತ್ತದೆ.

ವಾಸ್ತವವಾಗಿ ಇಲ್ಲಿ ಕುರಿ ಸಾಂಕೇತಿಕವಾಗಿದ್ದು ನಮ್ಮ ಮನಸ್ಸಿನಲ್ಲಿರುವ ಲೋಭ, ಮತ್ಸರ, ಮೋಹ ಮೊದಲಾದವುಗಳನ್ನು ಬಲಿ ನೀಡಬೇಕೆಂಬುದೇ ಈ ಹಬ್ಬದ ಸೂಚನೆಯಾಗಿದೆ. ಇದನ್ನೇ ತ್ಯಾಗ ಅಥವಾ ಕುರ್ಬಾನಿ ಎಂದು ಕರೆಯಲಾಗುತ್ತದೆ.ಜೊತೆಗೆ ಹಲಾಲ್ ರೂಪದಲ್ಲಿಯೇ ಈ ಬಲಿದಾನವೂ ನಡೆಯಲಿದೆ. ಒಂದೇ ಬಾರಿಗೆ ಪ್ರಾಣಿಯನ್ನು ಕೊಲ್ಲುವ ನಿಯಮವಿಲ್ಲ. ಹೀಗೆ ಮಾಡುವುದರಿಂದ ಪ್ರಾಣಿಯಲ್ಲಿರುವ ರಕ್ತವು ಅದರ ದೇಹದೊಳಗೆ ಉಳಿದುಬಿಡುತ್ತದೆ. ಆದರೆ ದೇವರಿಗೆ ಅರ್ಪಿಸಿದ ಬಲಿಯು ಅವನಿಗೆ ಅರ್ಪಿತವಾಗಬೇಕು ಎಂಬುದು ಅವರ ಆಚರಣೆಯಾಗಿದೆ.

Leave a Reply

Your email address will not be published. Required fields are marked *