Visitors have accessed this post 161 times.
ಉಡುಪಿ: ಉತ್ಸವಪ್ರಿಯ ಶ್ರೀ ಕೃಷ್ಣನ ಕಲಾಕ್ಷೇತ್ರ ರಾಜಂಗಣ ದಲ್ಲಿ ನಡೆದ ಭಜನಾ ಸ್ಪರ್ಧೆಯಲ್ಲಿ ಭಾಗವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದ ಶ್ರೀ ಲಕ್ಷೀ ಚೆನ್ನಕೇಶವ ಭಜನಾ ಮಂಡಳಿ ಮಾಣಿಕೊಳಲು ಹಕ್ಲಾಡಿ ದಿನಾಂಕ 08/08/2024 ರಂದು ಗುರುವಾರ ಉಡುಪಿ ರಾಜಂಗಣ ದಲ್ಲಿ ಜರುಗಿದ ಕುಣಿತ ಭಜನಾ ಸೇವೆಯಲ್ಲಿ ಮಾಣಿಕೊಳಲು ಭಜನಾ ತಂಡ ಭಾಗವಹಿಸಿತ್ತು.
ಇವರ ಭಜನಾ ಸೇವೆ ಕಂಡು ಖುಷಿ ಪಟ್ಟ ಶ್ರೀ. ಶ್ರೀ. ಶ್ರೀ. ಡಾ.ಸುಗುಣೀಂದ್ರ ತೀರ್ಥ ಶ್ರೀಪಾದರು ತಮ್ಮ ಗೀತ ಮಂದಿರಕ್ಕೆ ಕರೆಸಿ ಅವರ ಸಮ್ಮುಖದಲ್ಲಿ ಭಜನಾ ಸೇವೆ ಕಣ್ತುಂಬಿಕೊಂಡು ಮಾಣಿಕೊಳಲು ಭಜನಾ ಮಂಡಳಿಯ ಎಲ್ಲಾ ಪುಟಾಣಿ ಮಕ್ಕಳನ್ನು ಗೌರವಿಸಿ, ಮಂತ್ರಾಕ್ಷತೆ ನೀಡಿ, ಕೋಟಿಗೀತಾ ಲೇಖನ ಯಜ್ಞ ಪುಸ್ತಕ ವನ್ನು ನೀಡಿ ಆಶೀರ್ವದಿಸಿದರು