

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕು ಹಿರೇನಲ್ಲೂರು ಹೋಬಳಿ. ದಿನಾಂಕ 20: 8 :2026ರ 4:30 ಸಮಯದಲ್ಲಿ.. ಚಿಕ್ಕಬಳ್ಳಕೆರೆ ಪಶು ಆಸ್ಪತ್ರೆಯಿಂದ ತನ್ನ ವೃತ್ತಿ ಮುಗಿಸಿಕೊಂಡು ಕಾಮನಕೆರೆ ಮನೆಗೆ ತೆರಳುತ್ತಿದ್ದ ಶ್ರೀ ಆರ್ ಎಸ್ ಶಿವನಗೌಡ..ಎಂಬ ಸುಮಾರು 59 ವರ್ಷ ವಯಸ್ಸಿನವರಾಗಿದ್ದ ಇವರು ಗಿರಿಯಾಪುರದ ಪೆಟ್ರೋಲ್ ಬಂಕಿನ ಮುಂದೆ ಪೆಟ್ರೋಲ್ ಟ್ಯಾಂಕರ್ ಲಾರಿ ಒಂದು ಮೇಲೆ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರು ಪತ್ನಿ ಎರಡು ಜನ ಗಂಡು ಮಕ್ಕಳು ಒಬ್ಬ ಹೆಣ್ ಮಗಳನ್ನು ಹೊಂದಿದ್ದು ಮೊಮ್ಮಕ್ಕಳನ್ನು ಬಿಟ್ಟು ಅಗಲಿದ್ದಾರೆ. ಅಜ್ಜಂಪುರ ಠಾ ಣಾಧಿಕಾರಿ.ಹಾಗೂ ಸಿಬ್ಬಂದಿಗಳು.. ಮುಂದಿನ ಕ್ರಮ ಜರುಗಿಸಿದ್ದಾರೆ






