Visitors have accessed this post 306 times.
ವಾಮದಪದವು ಹಾಲು ಉತ್ಪಾದಕರ ಸಂಘದಲ್ಲಿ 11.01.24ರಂದು ಸಂಘದ ಅಧ್ಯಕ್ಷ ಗೋಪಾಲ ಕೃಷ್ಣ ಚೌಟ ಮತ್ತು ಸಂಘದ ಸಿಬ್ಬಂದ್ದಿ ಹರಿಶ್ಚಂದ್ರ ಶೆಟ್ಟಿಯವರು ಸಂಘದ ಸದಸ್ಯೆ ದಿವ್ಯ.ಜೆ ಯವರ ಪತಿ ರಂಜಿತ್ ಗಟ್ಟಿಯವರಿಗೆ ಕಬ್ಬಿಣದ ರಾಡಿನಿಂದ ಹಲ್ಲೆ ಮಾಡಿರುವುದನ್ನು ತುಳುನಾಡ ರಕ್ಷಣಾ ವೇದಿಕೆ ವಾಮದಪದವು ಖಂಡಿಸುತ್ತಾದೆ..ಹಾಲು ಉತ್ಪಾದಕ ಸಂಘದ ಆಡಳಿತ ಮಂಡಳಿ ಹಲ್ಲೆ ಮಾಡುವ ಪುಡಿ ರೌಡಿಗಳನ್ನೂ ಕೆಲಸದಿಂದ ತಕ್ಷಣ ತೆಗೆಯಬೇಕು ತೆಗೆಯದಿದ್ದರೆ ತು.ರ.ವೇ ವಾಮದಪದವು ಸಂಘದ ಎದುರುಗಡೆ ಸಂಘದ ಸದಸ್ಯರೊಟ್ಟಿಗೆ ಪ್ರತಿಭಟನೆ ಮಾಡಲಾಗುವುದು ಎಂದು ತು.ರ.ವೇ ವಾಮದಪದವಿನ ಅಧ್ಯಕ್ಷ ಹರೀಶ್ ಪೂಜಾರಿ ತಿಳಿಸಿದ್ದಾರೆ.
ವಾಮದಪದವು ಹಾಲು ಉತ್ಪಾದಕ ಸಂಘದಲ್ಲಿ ಹಾಲು ಉತ್ಪದಕರು ಹಾಲು ಕೊಂಡೊಗಲು ಇಂಜರಿಯುತಿದ್ದಾರೆ ಆ ಹಲ್ಲೆ ಮಾಡಿದ ಸಿಬ್ಬಂದಿಯನ್ನು ತಕ್ಷಣ ವಜಾ ಗೊಳಿಸಬೇಕು ವಾಮದಪದವು ಹಾಲು ಉತ್ಪಾದಕ ಸದಸ್ಯರ ಸಮಸ್ಯೆಯನ್ನೂ ಹಾಲು ಉತ್ಪಾದಕರ ನಿಗಮ ಮಂಡಳಿ ಮಂಗಳೂರಿನ ಆಡಳಿತ ಮಂಡಳಿಯ ಗಮನಕ್ಕೆ ತರಬೇಕೆಂದು ಮಹಿಳಾ ಘಟಕದ ಅಧ್ಯಕ್ಷ ಚೈತ್ರ.ಡಿ. ಶೆಟ್ಟಿ ಉಳಗುಡ್ಡೆ ವಾಮದಪದವು ಹಾಲು ಉತ್ಪಾದಕ ಸಂಘದ ಸದಸ್ಯರ ಮೇಲಿನ ಹಲ್ಲೆ ಪ್ರಕರಣ ಖಂಡಿಸಿದರು..