Visitors have accessed this post 251 times.
ಮೋದಿ ಬ್ರಿಗೇಡ್ ಮಂಗಳೂರು ಇವರ ಕಡೆಯಿಂದ ದಿನಾಂಕ 17/01/2024 ರಂದು ಶ್ರೀ ಕದಳೀ ಕಾಲ ಭೈರವನಾಥ್ ಮಂದಿರ ಯೋಗೀಶ್ವರ ಮಠ ಮಂಗಳೂರು ವಠಾರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಇನ್ನು ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರು ದಿನೇಶ್ ಕೆ ಉರ್ವ ಅಧ್ಯಕ್ಷರು ಪದ್ಮರಾಜ್ ಲೋಹಿತ್ ನಗರ, ಪ್ರದಾನ ಕಾರ್ಯದರ್ಶಿ ರವಿ ಕಾವೂರ್, ಹಾಗೂ ಮೋದಿ ಬ್ರಿಗೇಡ್ ಸರ್ವ ಸದಸ್ಯರು ನಿರತರಿದ್ದರು.
ಇನ್ನು ಈ ಕಾರ್ಯಕ್ರಮ ದಿನಾಂಕ 22 ಜನವರಿ 2024ರಂದು ಅಯೋಧ್ಯ ಶ್ರೀ ರಾಮನ ಮಂದಿರ ಪ್ರತಿಷ್ಠಾಪನೆಗೊಳ್ಳಲಿದೆ ಇನ್ನು ಈ ನಿಟ್ಟಿನಲ್ಲಿ ನಮ್ಮ ದೇಶದ ಪ್ರಧಾನಿಯಾಗಿರುವ ನರೇಂದ್ರ ಮೋದಿಯವರು ದೇಶದ ಎಲ್ಲಾ ದೇವಾಲಯಗಳು ಸ್ವಚ್ಛವಾಗಿಡುವಂತೆ ಕರೆ ಕೊಟ್ಟಿದ್ದಾರೆ ಹಾಗೇನೆ ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿ ಇಡಬೇಕೆಂದು ಕಾರ್ಯಕೊಟ್ಟಿರುವ ನಿಟ್ಟಿನಲ್ಲಿ ನಮ್ಮ ಮೋದಿ ಬ್ರಿಗೇಡ್ ಸಂಸ್ಥೆಯ ಮೋದಿ ಅವರ ಅಭಿಮಾನೀ ಗಳಿಂದ ಸೃಷ್ಟಿ ಆಗಿರುವುದರಿಂದ ಅವರ ಕರೆಗೆ ನಾವು ಅಭಿಮಾನಕೊಟ್ಟು ಅವರು ಕರೆಕೊಟ್ಟಂತೆ ನಾವು ಇಂದು ಕದ್ರಿ ಪಾರ್ಕಿನ ಬಲಿ ಇರುವ ಮಠದಲ್ಲಿ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಂಡಿದ್ದೇವೆ ಇದೇ ರೀತಿ ಇನ್ನು ಹಲವೆಡೆ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಇನ್ನು ಮೋದಿ ಬ್ರಿಗೇಡ್ ಸಂಸ್ಥೆ ಸಾಮಾಜಿಕ ಕಾರ್ಯಗಳ ಜೊತೆಗೆ ಕಾರ್ಮಿಕ ಶೈಕ್ಷಣಿಕ ಎಲ್ಲಾ ತರದ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲಿದೆ ಎಂದು ಸಂಸ್ಥೆಯ ಪ್ರದಾನ ಕಾರ್ಯದರ್ಶಿ ರವಿ ಕಾವೂರ್ ಹೇಳಿದರು.