Visitors have accessed this post 362 times.

ಕೇರಳದಲ್ಲಿ ಮೊದಲ ಖಾತೆ ತೆರೆದ ಬಿಜೆಪಿ: ನಟ ಸುರೇಶ್​ ಗೋಪಿಗೆ ಭರ್ಜರಿ ಗೆಲುವು

Visitors have accessed this post 362 times.

ತ್ರಿಶೂರ್​ (ಕೇರಳ): ತ್ರಿಶೂರ್​ ಲೋಕಸಭಾ ಕ್ಷೇತ್ರದಲ್ಲಿ ನಟ- ರಾಜಕಾರಣಿ ಬಿಜೆಪಿ ಅಭ್ಯರ್ಥಿ ಸುರೇಶ್​ ಗೋಪಿ ಅವರು ಗೆಲುವು ಸಾಧಿಸಿದ್ದಾರೆ. ಈ ಮೂಲಕ ದಶಕಗಳ ಕಾಯುವಿಕೆಯ ಬಳಿಕ ಕೇರಳದಲ್ಲಿ ಮೊದಲ ಬಾರಿಗೆ ಬಿಜೆಪಿ ತನ್ನ ಲೋಕಸಭಾ ಖಾತೆ ತೆರೆದಿದೆ. ತ್ರಿಶೂರ್​ನಲ್ಲಿ ಸಿಪಿಐನಿಂದ ಮಾಜಿ ಸಚಿವ ವಿ.ಎಸ್​. ಸುನೀಲ್​ ಕುಮಾರ್ ಹಾಗೂ ಹಿರಿಯ ಕಾಂಗ್ರೆಸ್​ ನಾಯಕ ಕೆ. ಮುರಳೀಧರನ್​ ಕಣದಲ್ಲಿದ್ದರು. ಮೊದಲ ಸುತ್ತಿನಿಂದಲೇ ಸ್ಪಷ್ಟ ಮುನ್ನಡೆ ಸಾಧಿಸಿದ್ದ ಸುರೇಶ್​ ಗೋಪಿ, ಇಬ್ಬರು ನಾಯಕರನ್ನು ಹಿಂದಿಕ್ಕಿ ಜಯ ಗಳಿಸಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ತ್ರಿಶೂರ್​ನಿಂದ ಸ್ಪರ್ಧಿಸಿದ್ದ ಸುರೇಶ್​ ಗೋಪಿ ಕಾಂಗ್ರೆಸ್​ ಅಭ್ಯರ್ಥಿ ಟಿ.ಎನ್​. ಪ್ರತಾಪನ್​ ಎದುರು ಸೋಲನಭವಿಸಿದ್ದರು. ಮೋದಿ ಪರ ಅಲೆಯ ಗಾಳಿ ಕೇರಳದಲ್ಲೂ ಬೀಸಿದ್ದು, ತ್ರಿಶೂರ್​ನಲ್ಲಿ ಸುರೇಶ್​ ಗೋಪಿ ಗೆಲುವು ಸಾಧಿಸಿದರೆ, ತಿರುವನಂತಪುರದಲ್ಲಿ ಕಾಂಗ್ರೆಸ್​ನ ಶಶಿ ತರೂರ್ ಹಾಗೂ ಬಿಜೆಪಿಯ​ ರಾಜೀವ್​ ಚಂದ್ರಶೇಖರ್​ ಅವರ ನಡುವೆ ಹಾವುಏಣಿ ಆಟ ನಡೆಯುತ್ತಿದೆ.

Leave a Reply

Your email address will not be published. Required fields are marked *