ರಾಜ್ಯದಲ್ಲಿ `ವಕ್ಫ್ ತಿದ್ದುಪಡಿ ಕಾಯ್ದೆ’ ಅನುಷ್ಠಾನ ಮಾಡಲ್ಲ : ಸಚಿವ ಜಮೀರ್ ಅಹ್ಮದ್ ಖಾನ್

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಕ್ಫ್ ತಿದ್ದುಪಡಿ ಕಾಯ್ದೆಗೆ ನಮ್ಮ ಸರ್ಕಾರದ ವಿರೋಧವಿದ್ದು, ರಾಜ್ಯದಲ್ಲಿಈ ಕಾನೂನು ಜಾರಿಗೆ ತರದಿರಲು ನಿರ್ಧರಿಸಲಾಗಿದೆ ಎಂದು ವಸತಿ ಸಚಿವ ಜಮೀ‌ರ್ ಅಹಮದ್ ಖಾನ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್ ಕಾಯ್ದೆಯನ್ನು ಪಶ್ಚಿಮ ಬಂಗಾಳ, ತಮಿಳುನಾಡು ಹಾಗೂ ಕೇರಳ ಸರ್ಕಾರಗಳು ಕೇರಳ ಜಾರಿಗೊಳಿಸದಿರಲು ನಿರ್ಧರಿಸಿವೆ ಹೀಗಾಗಿ ಕರ್ನಾಟಕದಲ್ಲೀ ವಕ್ಫ್ ಕಾನೂನು ಅನುಷ್ಠಾನ ಮಾಡಲ್ಲ ಎಂದು ಹೇಳಿಕೆ ನೀಡಿದ್ದಾರೆ.

 

Leave a Reply