Visitors have accessed this post 622 times.

ಕೊಳ್ನಾಡು: ರಾಷ್ಟ್ರಮಟ್ಟದ ಟಾರ್ಗೇಟ್ ಪಂದ್ಯಾಟಕ್ಕೆ ಬಂಟ್ವಾಳ ತಾಲೂಕಿನ ಸರಕಾರಿ ಪ್ರೌಡ ಶಾಲೆ ನಾರ್ಶದ ವಿದ್ಯಾರ್ಥಿಗಳಾದ ಅಬೂಬಕ್ಕರ್ ಅಪ್ವಾನ್,ಚೇತನ್ ಆಯ್ಕೆ

Visitors have accessed this post 622 times.

ಜನವರಿ 14ರಿಂದ 16ರವರೆಗೆ ತೆಲಂಗಾಣದ ಹೈದರಾಬಾದ್ ನಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಟಾರ್ಗೆಟ್ ಪಂದ್ಯಾಕೂಟದಲ್ಲಿ ಇಬ್ಬರು ವಿದ್ಯಾರ್ಥಿಗಳು ರಾಜ್ಯ ತಂಡವನ್ನು ಪ್ರತಿನಿಧಿಸಲಿದ್ದಾರೆ‌.ಇವರಿಗೆ ದೈಹಿಕ ಶಿಕ್ಷಕರಾದ ಅಬ್ದುಲ್ ರಪೀಕ್ ತರಬೇತಿ ನೀಡಿದ್ದು,ರಾಷ್ಟ್ರಮಟ್ಟದ ಟಾರ್ಗೆಟ್ ಬಾಲ್ ಆಟಗಾರರರಾದ ರಾಘವೇಂದ್ರ ಸಾಲೆತ್ತೂರು ಇದೀಗ ರಾಜ್ಯ ತಂಡದ ವ್ಯವಸ್ಥಾಪಕರಾಗಿರುತ್ತಾರೆ.ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿಯ ಅದ್ಯಕ್ಷರಾದ ಹಾಜಿ.ಎನ್.ಸುಲೈಮಾನ್ ಸಿಂಗಾರಿ,ಮುಖ್ಯ ಶಿಕ್ಷಕಿ ಲತಾ.ಕೆ.ಮತ್ತು ಶಿಕ್ಷಕ ವೃಂದ ಶುಭಹಾರೈಸಿ ಶುಭಾಶಯ ಸಲ್ಲಿಸಿದರು‌‌.

Leave a Reply

Your email address will not be published. Required fields are marked *