ಕರಾವಳಿ

ಮುಖ್ಯಮಂತ್ರಿ ಪದಕ ಪಡೆದ ಸುಬ್ರಹ್ಮಣ್ಯ ವಲಯದ ಉಪವಲಯಾರಣ್ಯಾಧಿಕಾರಿ

ಸುಬ್ರಹ್ಮಣ್ಯ: ಅತ್ಯುತ್ತಮ ಸೇವೆ ಸಲ್ಲಿಸಿದವರಿಗೆ ರಾಜ್ಯ ಸರ್ಕಾರ ನೀಡುವ ಮುಖ್ಯಮಂತ್ರಿ ಪದಕ ಸುಬ್ರಹ್ಮಣ್ಯ ವಲಯದ ಉಪವಲಯಾರಣ್ಯಾಧಿಕಾರಿ ಸಂತೋಷ್ ಶಿವಪ್ಪ ದಮ್ಮಸೂ‌ರು ಆಯ್ಕೆಯಾಗಿದ್ದಾರೆ.  ಸೆ.29 ರಂದು ಬೆಂಗಳೂರಿನ ವಿಧಾನ ಸೌದದ ಬ್ಲಾಕೆಂಟ್ ಹಾಲ್ ನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ  ಪದಕ ಪ್ರಧಾನ ಮಾಡಲಾಯಿತು. ಕರ್ತವ್ಯ ಸಮಯದಲ್ಲಿ ಜಾತಿವಾರು ಸಸಿಗಳ ಸಂಖ್ಯೆಯಲ್ಲಿ ಕೆಲಜಾತಿಯ ಸಸಿಗಳು ವಿರಳವಾಗಿರುವುದನ್ನು ಗಮನಿಸಿ ಅವುಗಳ ಸಾಂದ್ರತೆಯನ್ನು ಹೆಚ್ಚಿಸುವ ಸಲುವಾಗಿ ಅವುಗಳ ಬೀಜಗಳನ್ನು ಹಾಗೂ ಕಾಡು ಸಸಿಗಳನ್ನು ಸ್ವ ಇಚ್ಚೆಯಿಂದ ತಂದು ಸಸ್ಯ ಕ್ಷೇತ್ರದಲ್ಲಿ ಪೋಷಿಸಿದ್ದರು.  ಅಭಿವೃದ್ದಿಪಡಿಸಿದ ನೆಡುತೋಪುಗಳಲ್ಲಿ ನೆಟ್ಟುಪೋಷಣೆ ಮಾಡಿ ಸದರಿ ಜಾತಿಯ ಸಸಿಗಳ ಸಂಶೋಧನೆ ಮತ್ತು ಸಂಖ್ಯೆ ಹೆಚ್ಚಿಸುವಲ್ಲಿ ಗಮನಾರ್ಹ ಸಾಧನೆಯನ್ನು ಪರಿಗಣಿಸಿ ಮುಖ್ಯಮಂತ್ರಿ ಪದಕ ಆಯ್ಕೆಗೆ ಪರಿಗಣಿಸಲಾಗಿದೆ ಎಂದು ತಿಳಿದು ಬಂದಿದೆ.  ಮೂಲತ: ಸವದತ್ತಿ ತಾಲ್ಲೂಕಿನ ಹಾರುಗೊಪ್ಪ ಗ್ರಾಮದವರಾದ ಇವರು  2009ರಲ್ಲಿ ಉಪ್ಪಿನಂಗಡಿ ವಲಯದ ಶಿರಾಡಿಯಲ್ಲಿ ಅರಣ್ಯ ರಕ್ಷಕರಾಗಿ ಕೆಲಸಕ್ಕೆ ಸೇರಿದ್ದರು.  2013ರಲ್ಲಿ ಪಂಜ ವಲಯಕ್ಕೆ ವರ್ಗಾವಣೆ ಗೊಂಡೂ ಬಳಿಕ 2000 ರಲ್ಲಿ  ಉಪ ಅರಣ್ಯಾಧಿಕಾರಿಯಾಗಿ ಬಡ್ತಿ ಗೊಂಡು 2021ರಲ್ಲಿ ಸುಬ್ರಹ್ಮಣ್ಯ ವಲಯದ ನೆಟ್ಟಣದ ಕೇಂದ್ರೀಯ ಮರಗಳ ಸಂಗ್ರಹಾಲಯದಲ್ಲಿ ಕರ್ತವ್ಯದಲ್ಲಿದ್ದಾರೆ.

ಕರಾವಳಿ

ದಾರುಲ್ ಉಲೂಮ್ ಮಸೀದಿ ಇದರ ವತಿಯಿಂದ ಯುವ ಉದ್ಯಮಿ ಲತೀಫ್ ಗುರುಪುರ ರವರಿಗೆ ಹೆಮ್ಮೆಯ ಸನ್ಮಾನ

ಮಂಗಳೂರು : ಪ್ರವಾದಿ ಮೊಹಮ್ಮದ್ (ಸ. ಆ.) ರವರ ಜನ್ಮ ದಿನಾಚರಣೆ ಅಂಗವಾಗಿ ದಾರುಲ್ ಉಲೂಮ್ ಮಸೀದಿ ಮತ್ತು ಮದರಸ ಗುರುಪುರ ಪೇಟೆ ಇದರ ವತಿಯಿಂದ ಮೀಲಾದ್…

ಕರಾವಳಿ

ಮಂಗಳೂರು: ಮಹೇಶ್ ಬಸ್ ಮಾಲೀಕ ಪ್ರಕಾಶ್ ಶೆಟ್ಟಿ ಆತ್ಮಹತ್ಯೆಗೆ ಶರಣು

ಮಂಗಳೂರು : ಮಂಗಳೂರಿನ ಖಾಸಗಿ ಬಸ್ ನ ಮಾಲೀಕರೊಬ್ಬರು ತಾವು ಇರುವ ಅಪಾರ್ಟ್ ಮೆಂಟ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರನ್ನು ಮಹೇಶ್ ಬಸ್ ಮಾಲೀಕ…

ಬ್ರೇಕಿಂಗ್ ನ್ಯೂಸ್ ರಾಜ್ಯ

ಸಿಎಂ ಕುಳಿತ್ತಿದ್ದ ವೇದಿಕೆಯಲ್ಲಿ ನಿಂತೇ ಪ್ರಶಸ್ತಿ ಸ್ವೀಕರಿಸಿದ ಹರೇಕಳ ಹಾಜಬ್ಬ; ಪದ್ಮಶ್ರೀ ಪುರಸ್ಕೃತರ ಸರಳತೆಗೆ ಮೆಚ್ಚುಗೆ

ಬೆಂಗಳೂರು: ಇಂದು ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ…

ಕರಾವಳಿ ಬ್ರೇಕಿಂಗ್ ನ್ಯೂಸ್

ಉಪ್ಪಿನಂಗಡಿ: ಎಂಡೋ ಸಂತ್ರಸ್ತ ಬಾಲಕ ಸಾವು..!

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಕೊಣಾಲು ಗ್ರಾಮದ ಪಾಂಡಿಬೆಟ್ಟು ಮನೆ ನಿವಾಸಿ, ಎಂಡೋ ಸಂತ್ರಸ್ತನಾಗಿದ್ದ ಹೃತಿಕ್ ಎಂಬ ಹನ್ನೆರಡು ವರ್ಷದ ಬಾಲಕ ಶನಿವಾರ ಸಾವನ್ನಪ್ಪಿದ ಬಗ್ಗೆ ವರದಿಯಾಗಿದೆ. ತನ್ನನ್ನು…

ದೇಶ -ವಿದೇಶ ಬ್ರೇಕಿಂಗ್ ನ್ಯೂಸ್

ಎಲ್‌ಪಿಜಿ ಸಿಲಿಂಡರ್ ಬೆಲೆ 209 ರೂ. ಹೆಚ್ಚಳ

ನವದೆಹಲಿ: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಭಾನುವಾರ 209 ರೂ.ಗಳಷ್ಟು ಹೆಚ್ಚಿಸಲಾಗಿದೆ. ತೈಲ ಕಂಪನಿಗಳು 19 ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ಗಳ ಬೆಲೆಯನ್ನು 158…

ಬ್ರೇಕಿಂಗ್ ನ್ಯೂಸ್ ರಾಜ್ಯ

ಮುಸ್ಲಿಮರ ಅನುದಾನ 10 ಸಾವಿರ ಕೋಟಿಗೆ ಹೆಚ್ಚಿಸುತೇನೆ – ಸಿದ್ದರಾಮಯ್ಯ

ಬೆಂಗಳೂರು: ಮುಖ್ಯ‌ಮಂತ್ರಿಯಾಗಿ ನನ್ನ ಅವಧಿ ಮುಗಿಯುವ ಮುನ್ನ ಮುಸ್ಲಿಮರ ಅಭಿವೃದ್ಧಿ ಅನುದಾನವನನ್ನು 10 ಸಾವಿರ ಕೋಟಿಗೆ ಹೆಚ್ಚಿಸಲಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ‌. ಬೆಂಗಳೂರಿನಲ್ಲಿ ಬ್ಯಾರಿ ವೆಲ್‌ಫೇರ್…