Visitors have accessed this post 417 times.
ಬೆಂಗಳೂರು : ಇನ್ಮುಂದೆ ಜಿಲ್ಲಾ ಪಂಚಾಯತ್ ‘CEO’ ಗಳು ವಾರಕ್ಕೊಮ್ಮೆ ತಾಲ್ಲೂಕು ಮತ್ತು ಗ್ರಾಮ ಪಂಚಾಯತಿ ಕಚೇರಿಗಳಿಗೆ ಭೇಟಿ ನೀಡುವುದು ಕಡ್ಡಾಯವಾಗಿದೆ ಎಂದು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ನೀಡಿದರು. ಸಿಇಒಗಳ ಜೊತೆ ಮಂಗಳವಾರ ವಿಡಿಯೋ ಸಂವಾದ ನಡೆಸಿದ ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ಮಹತ್ವದ ಸೂಚನೆ ನೀಡಿದರು. ಸರ್ಕಾರದ ಆದೇಶ, ಸೂಚನೆ ಪಾಲಿಸದೇ ತಮ್ಮದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ನೋಟಿಸ್ ನೀಡಬೇಕು ಎಂದು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ನೀಡಿದರು. ಬಾಕಿ ಇರುವ ಕಾಮಗಾರಿಗಳ ವಿವರಗಳನ್ನು ಪರಿಶೀಲಿಸಿದ ಸಚಿವರು ಕೆಲವು ಜಿಲ್ಲೆಗಳಲ್ಲಿ ಪ್ರಗತಿ ಕುಂಠಿತವಾಗಿರುವುದನ್ನು ಗಮನಿಸಿ ತಕ್ಷಣವೆ ಕಾಮಗಾರಿಗಳನ್ನು ಚುರುಕುಗೊಳಿಸಿ ಮುಂದಿನ ಮೂರು ತಿಂಗಳ ಅವಧಿಯಲ್ಲಿ ಅನುದಾನವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಂತೆ ಸೂಚನೆ ನೀಡಿದರು.Related Posts
ತೆರಿಗೆ ಮುಸ್ಲಿಮರ ಮನೆಗೆ, ಪೂಂಜಾ ಹೇಳಿಕೆ, ಕೊಲ್ಲಿ ಅನಿವಾಸಿಗಳ ಹಣ ಕರಾವಳಿ ಅಭಿವೃದ್ಧಿಗೆ : ಕೆ.ಅಶ್ರಫ್
Visitors have accessed this post 201 times.
ಮಂಗಳೂರು: ಇಂದಿನ ರಾಜ್ಯ ಸರ್ಕಾರದ ಬಜೆಟ್ ವಿರೋಧಿಸಿ ಬಿಜೆಪಿ ಶಾಸಕರು ಪ್ರತಿಭಟನೆ ನಡೆಸುವ ಮಧ್ಯೆ ಹರೀಶ್ ಪೂಂಜಾ ತಾನು ಪೋಸ್ಟ್ ಹಾಕಿ ದಕ್ಷಿಣ ಕನ್ನಡ ಜಿಲ್ಲೆಯ ತೆರಿಗೆ…
ಮಂಗಳೂರು: ಬೈಕ್ ಗೆ ಕಾರು ಡಿಕ್ಕಿ – ಸವಾರ ಸಾವು
Visitors have accessed this post 637 times.
ಮಂಗಳೂರು:ಬೈಕ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಮಂಗಳೂರಿನ ಕಾವೂರು ಜಂಕ್ಷನ್ ನ ಕೆಐಒಸಿಎಲ್ ಕ್ವಾಟ್ರಸ್ ಮುಖ್ಯಗೇಟಿನ ಎದುರು ಮಂಗಳವಾರ ತಡರಾತ್ರಿ…
ಯಶಸ್ವಿಯಾಗಿ ನಡೆದ ಪೆನ್ ಪಾಯಿಂಟ್ ಕೋಬ್ರಾಸ್ ಕ್ರೆಕೆಟ್ ಫೆಸ್ಟ್ 2024; ಚಾಂಪಿಯನ್ ಆಗಿ ಹೊರಹೊಮ್ಮಿದ ಪೆನ್ ಪಾಯಿಂಟ್ ಬ್ಲೂ ಹಂಟರ್ಸ್ ತಂಡ
Visitors have accessed this post 401 times.
ಪುತ್ತೂರು: ಸಾಹಿತ್ಯ ಮತ್ತು ಸಾಮಾಜಿಕ ಚಟುವಟಿಕೆಗಳ ಮೂಲಕ ಸಮಾಜದಲ್ಲಿ ಹೆಸರುವಾಸಿಯಾದ, ವಿವಿಧ ಕ್ಷೇತ್ರದ ಸಾಧಕರನ್ನೊಳಗೊಂಡ “ಪೆನ್ ಪಾಯಿಂಟ್ ಸ್ನೇಹವೇದಿಕೆ” ತಂಡದ ಮೂರನೇ ಆವೃತಿಯ ಕೋಬ್ರಾಸ್ ಕ್ರಿಕೆಟ್ ಫೆಸ್ಟ್…