Visitors have accessed this post 607 times.
ಬೆಂಗಳೂರು : ಬೆಂಗಳೂರಿನಲ್ಲಿ ಕೊಲೆ ಆರೋಪಿಯ ಭೀಕರ ಹತ್ಯೆ ನಡೆದಿದ್ದು, ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಜಿಲ್ಲೆಯ ಆನೇಕಲ್ ತಾಲೂಕಿನ ಮರಸೂರು ಗ್ರಾಮದಲ್ಲಿ ನಡೆದಿದ್ದು.ಹಳೆ ವೈಷಮ್ಯಕ್ಕೆ ಕೊಲೆ ಆಗಿದೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ.ಆರೋಪಿ ಯಾದಂತ ವಿಜಯ್ ಕುಮಾರ್ ಎನ್ನುವವನನ್ನು ಮನೋಜ್ ಅಲಿಯಾಸ್ ಬಬ್ಲು, ಕೊಲೆ ಆರೋಪಿಯನ್ನು ಹತ್ಯೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.
ಆನೇಕಲ್ ತಾಲೂಕಿನ ಮರಸೂರಿನಲ್ಲಿ ಇದೀಗ ಈ ಘಟನೆ ನಡೆದಿದೆ. ಮುಂಜಾನೆ ನಾಲ್ಕು ಗಂಟೆಗೆ ಮನೆಯಿಂದ ಕರೆದೋಯ್ದು ಕೊಲೆಗೈಯಲಾಗಿದೆ. ಮನೋಜ್ ಅಲಿಯಾಸ್ ಬಬ್ಲು, ಎನ್ನುವ ಆರೋಪಿ ಕೊಲೆಯಲ್ಲಿ ಜೈಲಿಗೆ ಹೋಗಿ ಬಂದಿದ್ದ ಎಂದು ಹೇಳಲಾಗುತ್ತಿದೆ.ಮನೋಜ್ ಕಡೆ ಅವರೇ ಕೊಲೆ ಮಾಡಿದ್ದಾರೆ ಎಂದು ಮೃತ ವಿಜಯ್ ಕುಮಾರ್ ಅವರ ತಂದೆ ಆರೋಪಿಸುತ್ತಿದ್ದಾರೆ ಘಟನೆ ಸ್ಥಳಕ್ಕೆ ಇದೀಗ ಚಂದಾಪುರ ಪೊಲೀಸ್ ಠಾಣೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ ಆನೇಕಲ್ ತಾಲೂಕಿನಲ್ಲಿ ಘಟನೆ ಕುರಿತು ಪ್ರಕರಣ ದಾಖಲಾಗಿದೆ.