

ಚಿಕ್ಕಮಗಳೂರು : ಡಾ :ರಾಜಕುಮಾರ್ ಅವರ ಹುಟ್ಟು ಹಬ್ಬ, ಜಿಲ್ಲೆಯ ಹರಿಹರದ ಹಳ್ಳಿಯಲ್ಲಿ ಬೇಸಿಗೆ ಬೆಸುಗೆ ಕಾರ್ಯಕ್ರಮ ಇಂದು ಡಾ : ರಾಜಕುಮಾರ್ ಅವರ ಹುಟ್ಟು ಹಬ್ಬದ ನೆನಪಿಗಾಗಿ ಇಂದು ಹರಿಹರದ ಹಳ್ಳಿಯಲ್ಲಿ (ಚಿಕ್ಕಮಗಳೂರು ತಾ ) ಪ್ರಾಥಮಿಕ ಶಾಲಾಮಕ್ಕಳಿಂದ ಬೇಸಿಗೆಯ ಬಸುಗೆ ಎಂಬ ಕಾರ್ಯಕ್ರಮ ನೆಡೆಯಿತು, ಕಾರ್ಯಕ್ರಮದಲ್ಲಿ ಊರಿನ ಹಿರಿಯ ನಾಗರೀಕರು, ಮುಖಂಡರು, ಗ್ರಾಮಸ್ಥರು ಶಿಕ್ಷಕರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಎಲ್ಲ ಎಲ್ಲರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಿತು, ಕಾರ್ಯಕ್ರಮದಲ್ಲಿ ಗ್ರಾಮಸ್ಥರ ಸಹಕಾರ ತುಂಬಾ ಮುಖ್ಯವಾಗಿ ಕಂಡುಬಂದಿದ್ದು, ಕಾರ್ಯಕ್ರಮದಲ್ಲಿ ಮುಖ್ಯವಾಗಿ ರಾಜಕುಮಾರ್ ಅವರ ನೆನಪಿಗಾಗಿ ಅವರದ್ದೇ ಅಭಿನಯದ ಭಕ್ತಪ್ರಹಲ್ಲಾದ ಎಂಬ ಕನ್ನಡ ಸಿನಿಮಾದ ಒಂದು ತುಣುಕು ಪ್ರದರ್ಶನವನ್ನು ಶಾಲಾ ಮಕ್ಕಳು ಅಭಿನಹಿಸಿದರು ಆದಲ್ಲಿ ಅತೀ ಮುಖ್ಯವಾಗಿ ಹಿರಣ್ಯಕಷ್ಯಪನ ಪಾತ್ರದಲ್ಲಿ ಕಾಣಿಸಿಕೊಂಡ ಶಾಲೆಯ 4ನೇ ತರಗತಿಯ ತನು ಎಂಬುವವರ ನಟನೆ ಅದ್ಭುತ ವಾಗಿತ್ತು, ಅವರ ಅಭಿನಯ ಸೇರಿದ್ದ ಸಭಿಕರಿಗೆ (ಸರ್ವರಿಗೂ ) ಡಾ : ರಾಜ್ ಕುಮಾರ್ ಅವರ ನೆನಪಿಸಿತ್ತು.






