

ಮಂಗಳೂರು:-ಮಂಗಳೂರಿನ ಪಾಸ್ಪೋರ್ಟ್ ಕಚೇರಿಯಲ್ಲಿ ಸಮಸ್ಯೆ ತಲೆದೋರಿದ್ದು ಕೂಡಲೇ ಸಮಸ್ಯೆಯನ್ನು ಇತ್ಯರ್ಥ ಪಡಿಸುವಂತೆ ಖ್ಯಾತ. ಚಿಂತಕ ಮಾನವ ಹಕ್ಕು ಭ್ರಷ್ಟಾಚಾರ ನಿರ್ಮೂಲನೆ ಸಂಸ್ಥೆಯ ರಾಜ್ಯ ಕಾರ್ಯದರ್ಶಿ ಕಮರುದ್ದೀನ್ ಸಾಲ್ಮರ ಮನವಿಯನ್ನು ಮಾಡಿದ್ದಾರೆ.
ಮುಂಗಡ ಪ್ರವೇಶ ಪಡೆದು ಹಿಂದಿನ ದಿನ ದೂರದ ಊರಿನಿಂದ ಬಂಧು ವಾಸ್ತವ್ಯ ಹೂಡಿದ ಅದೆಷ್ಟೋ ಪ್ರವಾಸಿಗರಿಗೆ ತೊಂದರೆ ಆಗುತಿದ್ದು ಆದುದರಿಂದ ಸಂಬಂಧ ಪಟ್ಟ ಅಧಿಕಾರಿಗಳು ಈ ಸಮಸ್ಯೆವನ್ನು ಕೂಡಲೇ ಇತ್ಯರ್ಥ ಪಡಿಸುವಂತೆ ಹಾಗೂ ಮುಂದಿನ ದಿನಗಳಲ್ಲಿ ಯಾವುದೇ ಪ್ರವಾಸಿಗಳಿಗೆ ತೊಂದರೆ ಯಾಗದಂತೆ ನೋಡಿಕೊಳ್ಳ ಬೇಕಾಗಿ ಸಂಬಂದಪಟ್ಟ ಇಲಾಖೆಗೆ ಮನವಿಯನ್ನು ಮಾಡಿರುತ್ತಾರೆ. ಒಂದು ವೇಳೆ ಇದೇ ರೀತಿ ಸಮಸ್ಯೆ ಪದೇ ಪದೇ ಮುಂದುವರಿದರೆ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಕೆಯನ್ನು ನೀಡಿದ್ದಾರೆ. ..






