Visitors have accessed this post 133 times.
ಬಜ್ಪೆ : ತೆಂಗಿನಕಾಯಿ ತೆಗಿಯಲು ಹೋದ ಯುವಕ ನೀರಿಗೆ ಬಿದ್ದು ಪ್ರಾಣ ಕಳೆದುಕೊಂಡ ಘಟನೆ ಕಟೀಲ್ ನಲ್ಲಿ ನಡೆದಿದೆ,
ಮೃತದೇಹ ಮೇಲಕ್ಕೆತ್ತಿದ ಗೂಡಿನಬಳಿ ಜೀವರಕ್ಷಕ ತಂಡದ ಯುವಕರು ಮೃತ ಯುವಕನನ್ನು ಕಟೀಲು ಮೂಲದ ಅಶೋಕ್(35) ಎಂದು ಗುರುತಿಸಲಾಗಿದೆ .
ಶುಕ್ರವಾರ ಸಂಜೆ ಸುಮಾರು 5:10 ರ ವೇಳೆಗೆ ನದಿ ನೀರಿಗೆ ತೆಂಗಿನಕಾಯಿ ತೆಗಿಯಲು ಹೋದ ಸಂದರ್ಭದಲ್ಲಿ ನೀರಿಗೆ ಬಿದ್ದಿದ್ದಾರೆ ಎನ್ನಲಾಗಿದೆ. ಜೊತೆಯಲ್ಲಿ ಇದ್ದ ಇನ್ನೊಬ್ಬ ನೀಡಿದ ಮಾಹಿತಿಯಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಸ್ಥಳೀಯರು ಘಟನೆಯನ್ನು ಖಚಿತ ಪಡಿಸಿಕೊಂಡಿದ್ದಾರೆ.
ತಕ್ಷಣ ಕಾರ್ಯಾಚರಣೆ ನಡೆಸಿದ ಗೂಡಿನಬಳಿ ನಿವಾಸಿ ಮುಹಮ್ಮದ್ ಮಮ್ಮು ಹಾಗೂ ಜೀವ ರಕ್ಷಕ ತಂಡದ ಯುವಕರಾದ ಇರ್ಶಾದ್ ಡ್ರೀಮ್ಸ್, ಮೃತದೇಹವನ್ನು ಮೇಲಕ್ಕೆತ್ತುವಲ್ಲಿ ಸಫಲರಾಗಿದ್ದಾರೆ. ಘಟನಾ ಸ್ಥಳಕ್ಕೆ ಬಜ್ಪೆ ನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಬಜ್ಪೆ ಸರಕಾರಿ ಆಸ್ಪತ್ರೆಗೆ ಸಾಧಿಸಿದ್ದಾರೆ.